ಮೈಸೂರು : ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಡಿನೋಟಿಫಿಕೇಷನ್ ಮಾಡಿಲ್ಲ ರಿಮಾಡಿಫಿಕೇಷನ್ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಮೈಸೂರಿನ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ನಾನು ಪಾಠ ಕಲಿಯಬೇಕಿಲ್ಲ. ಬಿಜೆಪಿ ಮತ್ತು ಹೆಚ್ ಡಿ ಕುಮಾರಸ್ವಾಮಿ ಅವಧಿಯಲ್ಲಿ ಡಿನೋಟಿಫಿಕೇಷನ್ ಆಗಿರುವುದು. ನನ್ನ ಅವಧಿಯಲ್ಲಿ ರಿಮಾಡಿಫಿಕೇಷನ್ ಆಗಿದೆ, ಡಿನೋಟಿಫಿಕೇಷನ್ ಆಗಿಲ್ಲ ಎಂದು ಸ್ಪಷ್ಟನೇ ನೀಡಿದರು.
ಬಿಜೆಪಿಯವರಿಂದ ನಾವು ಪಾಠಕಲಿಯಬೇಕಾಗಿಲ್ಲ ಎಂದ ಅವರು, ಈ ರೀತಿ ಸುಳ್ಳು ಆರೋಪ ಮಾಡುವುದರಿಂದ ಏನು ಪ್ರಯೋಜನವಾಗಲ್ಲ ಎಂದು ಕಿಡಿಕಾರಿದರು.
ಕೆಂಪಯ್ಯ ಆಯೋಗ ರಚಿಸಿರೋದೆ ದೂರು ನೀಡುವುದಕ್ಕೆ, ದೂರುಗಳು, ದಾಖಲೆಗಳು ಇದ್ದರೆ ಅದನ್ನು ಆಯೋಗಕ್ಕೆ ನೀಡಲಿ ಎಂದು ತಿಳಿಸಿದ್ದಾರೆ.