ಬೆಂಗಳೂರು : ಬಂಧಿಸಲ್ಪಟ್ಟ ನಾಲ್ವರು ಶಂಕಿತ ಉಗ್ರರಿಂದ ಆತಂಕಕಾರಿ ಮಾಹಿತಿಗಳು ಬಹಿರಂಗವಾಗಿದೆ.
ಬಂಧಿಸಲ್ಪಟ್ಟ ಶಂಕಿತ ಉಗ್ರರನ್ನು ವಿಶೇಷ ತನಿಖಾ ತಂಡ ತೀವ್ರ ವಿಚಾರಣೆಗೊಳಪಡಿಸಲಾಗಿದ್ದು, ಸ್ಪೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾರೆ.
ಪ್ರಮುಖ ಆರೋಪಿ ಅಫಕ್ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದವನಾಗಿದ್ದು, ಭಟ್ಕಳದಲ್ಲಿ ಪಿಎಫ್ ಐ ಅಧ್ಯಕ್ಷನಾಗಿದ್ದ. ಅಲ್ಲದೇ ಈತ ಪಾಕಿಸ್ತಾನದಲ್ಲಿ ಬಾಂಬ್ ತಯಾರಿಕೆ ತರಬೇತಿ ಪಡೆದುಕೊಂಡಿದ್ದು, ಸ್ವತ: ತಾನೇ ಬಾಂಬ್ ತಯಾರಿಸುವಲ್ಲಿ ನಿಪುಣನಾದಿದ್ದ ಎಂದು ತಿಳಿದುಬಂದಿದೆ. ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ.
ಇನ್ನೊಬ್ಬ ಶಂಕಿತ ಆರೋಪಿ ಅಬ್ದುಲ್ ಸಬೂರ್ ಐಎಂ ಉಗ್ರ ಸಂಘಟನೆಗೆ ಬೇಕಾದ ಸ್ಫೋತಕಗಳನ್ನು ಪೂರೈಕೆ ಮಾಡುತ್ತಿದ್ದ. ಇನ್ನೊಬ್ಬ ಆರೋಪಿ ಸದ್ದಾಂ ಹುಸೇನ್ 2011-12ರಲ್ಲಿ ಐಎಂ ನಡೆಸಿದ್ದ ಬಾಂಬ್ ಸ್ಫೋಟದಲ್ಲಿಯೂ ಈತನ ಕೈವಾಡವಿತ್ತು. ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದ ಸ್ಥಳಗಳಿಗೆ ತೆರಳಿ ಯಾವ ರೀತಿಯ ಸ್ಫೋಟಕಗಳನ್ನು ಬಳಸಬೇಕು ಎಂಬ ಬಗ್ಗೆ ಉಗ್ರರಿಗೆ ಮಾಹಿತಿ ನೀಡುತ್ತಿದ್ದ.
ಇನ್ನೊಬ್ಬ ಆರೋಪಿ ಅಬ್ದುಲ್ ಸೈಯದ್ ರಿಯಾಜ್, ಐಎಂ ಸಂಘತನೆಯ ಉಗ್ರ ರಿಯಾಜ್ ಭಟ್ಕಳ್ ಸಂಬಂಧಿಯಾಗಿದ್ದಾನೆ. ರಿಯಾಜ್ ನನ್ನು ತನಿಖಾ ತಂಡ ತೀವ್ರ ವಿಚಾರಣೆ ನಡೆಸಿದ್ದು, ಇನ್ನಷ್ಟು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.