ಮುಂಬೈ : 'ವಿಧ್ವಂಸಕ ಕೃತ್ಯ' ನಡೆಸುವ ಬಗ್ಗೆ ಐ.ಎಸ್.ಐ.ಎಸ್ ಸಂಘಟನೆಯ ಎಚ್ಚರಿಕೆ ಸಂದೇಶ ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದೆ.
ವಿಮಾನ ನಿಲ್ದಾಣದ ಗೋಡೆಯ ಮೇಲೆ ಐ.ಎಸ್.ಐ.ಎಸ್ ಉಗ್ರರ ಸಂದೇಶ ಕಾಣಿಸಿಕೊಂಡಿದ್ದು ಭದ್ರತಾ ಸಿಬ್ಬಂಧಿಗಳಿಗೆ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಭಿತ್ತಿ ಪತ್ರ ಕಾಣಿಸಿಕೊಂಡಿದ್ದು ಜ.10ರಂದು ಉಗ್ರ ಕೃತ್ಯ ನಡೆಸುವುದಾಗಿ ಐ.ಎಸ್.ಐ.ಎಸ್ ಸಂಘಟನೆ ಹೇಳಿದೆ.
ಗೋಡೆಯ ಮೇಲೆ ಪೆನ್ ನಿಂದ ಎಚ್ಚರಿಕೆ ಸಂದೇಶ ಗೀಚಲಾಗಿದ್ದು, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳು ಎಚ್ಚರಿಕೆ ಸಂದೇಶ ಬರೆದವರಿಗಾಗಿ ಶೋಧಕಾರ್ಯ ಪ್ರಾರಂಭಿಸಿದ್ದು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.
ಗಣರಾಜ್ಯೋತ್ಸವ ದಿನಾಚರಣೆಯಂದು ದೇಶಾದ್ಯಂತ ಉಗ್ರರು ದಾಳಿ ನಡೆಸುವ ಬಗ್ಗೆ ಎಚ್ಚರಿಕೆ ಬಂದಿರುವ ಬೆನ್ನಲ್ಲೇ ಈ ಬರಹ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಇತ್ತೀಚೆಗಷ್ಟೇ ಮುಂಬೈ ಯುವಕ ಐ.ಎಸ್.ಐ.ಎಸ್ ಸಂಘಟನೆ ಸೇರಿ ಭಾರತಕ್ಕೆ ವಾಪಸ್ಸಾಗಿದ್ದರಿಂದ ಭದ್ರತಾ ಸಿಬ್ಬಂಧಿಗಳು ಮತ್ತಷ್ಟು ತಲೆಕೆಡಿಸಿಕೊಳ್ಳುವ ಸ್ಥಿತಿ ಉಂಟಾಗಿದೆ.