ಹುಬ್ಬಳ್ಳಿ : ಭಯೋತ್ಪಾದನೆ ಹಾಗೂ ವಿದ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂಬ ಹಿನ್ನೆಲೆಯಲ್ಲಿ ಕಳೆದ 2008ರಂದು ಪೊಲೀಸರು ಬಂಧಿಸಿದ್ದ 17 ಶಂಕಿತ ಸಿಮಿ ಉಗ್ರರನ್ನು ಹುಬ್ಬಳ್ಳಿ ಒಂದನೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.
ಸಾಕ್ಷ್ಯಾಧಾರಗಳನ್ನು ಸಾಬೀತುಗೊಳಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಧೀಶ ಗೋಪಾಲಕೃಷ್ಣ ಕೊಳ್ಳಿ ತೀರ್ಪಿನಲ್ಲಿ ತಿಳಿಸಿದ್ದಾರೆ. 278 ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಇತರ ಏಳು ವರ್ಷಗಳವರೆಗೆ ವಿಚಾರಣೆ ನಡೆಸಿತ್ತು. ಇಪ್ಪತ್ತು ಆರೋಪಿಗಳಲ್ಲಿ ಇನ್ನೂ ಮೂವರ ವಿಚಾರಣೆ ಬಾಕಿಯಿದೆ.
ಬಂಧಿತರ ಬಳಿಯಿಂದ ಬಾಂಬ್, ಡಿಟೊನೇಟರ್, ಬಂದೂಕು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಿಐಡಿ ಪೊಲೀಸರು ವಶಪಡಿಸಿಕೊಂಡು ಆರೋಪಪಟ್ಟಿ ಸಲ್ಲಿಸಿ 462 ಪುಟಗಳ ಮೂರು ಚಾರ್ಜ್ಶೀಟ್ ಸಲ್ಲಿಸಿದ್ದರು.
ಮೋಸ್ಟ್ ವಾಂಟೆಡ್ ಗಳಾದ ಯಾಸಿನ್ ಭಟ್ಕಳ್, ರಿಯಾಜ್ ಭಟ್ಕಳ್ ಹಾಗೂ ಇಕ್ಬಾಲ್ ಭಟ್ಕಳ್ ಅವರ ವಿಚಾರಣೆ ಬಾಕಿಯಿದೆ. ಈ ತೀರ್ಪಿನಲ್ಲಿ ಕೇಳಲು ಹುಬ್ಬಳ್ಳಿ ನ್ಯಾಯಾಲಯದ ಸುತ್ತ ಭಾರೀ ಜನರು ಸೇರಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.