ನವದೆಹಲಿ : ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರಂತರವಾಗಿ ಹೀನಾಯ ಸೋಲುಂಟಾಗುತ್ತಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ತನ್ನ ಬಗ್ಗೆ ತನಗೇ ಕೆಲವು ಅನುಮಾನಗಳು ಉದ್ಭವಿಸಿದೆ.
ಕಾಂಗ್ರೆಸ್ ಪಕ್ಷವನ್ನು, ಬಿಜೆಪಿ ಸೇರಿದಂತೆ ರಾಜಕೀಯ ವಿರೋಧಿಗಳು ಹಿಂದೂ ದ್ವೇಷಿ ಪಕ್ಷ, ಅಲ್ಪಸಂಖ್ಯಾತರ ಪರವಾಗಿರುವ ಪಕ್ಷ ಎಂದೇ ಲೇವಡಿ ಮಾಡಿ ಟೀಕಿಸುತ್ತಿದ್ದರು. ಅಧಿಕಾರದಲ್ಲಿದ್ದಾಗ ಇಂಥಹ ಟೀಕೆಗಳಿಗೆ ಬೆದರದ ಕಾಂಗ್ರೆಸ್, ದೇಶಾದ್ಯಂತ ಇರುವ ತನ್ನ ನೆಲೆಯನ್ನು ಒಂದೊಂದಾಗಿಯೇ ಕಳೆದುಕೊಳ್ಳುತ್ತಿರುವುದರಿಂದ ತಾನು ಹಿಂದೂ ದ್ವೇಷಿ ಇರಬಹುದಾ ಎಂಬ ಸಣ್ಣ ಗುಮಾನೆ ಕಾಂಗ್ರೆಸ್ ಗೂ ಕಾಡಲು ಆರಂಭವಾಗಿದೆ.
ಅದಕ್ಕಾಗಿಯೇ ತಾನು ಹಿಂದೂ ದ್ವೇಷಿನಾ? ಎಂಬುದರ ಬಗ್ಗೆ ತನ್ನ ಕಾರ್ಯಕರ್ತರಿಂದ ಪ್ರತಿಕ್ರಿಯೆ ಪಡೆಯಲು ಮುಂದಾಗಿದೆ.
ಲೋಕಸಭಾ ಚುನಾವಣೆಗಳೂ ಸೇರಿದಂತೆ ಇತ್ತೀಚೆಗಷ್ಟೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಸೆಕ್ಯುಲರ್ ನೀತಿ ಬಗ್ಗೆಯೇ ಹೆಚ್ಚು ಮಾತನಾಡಿದ್ದ ಕಾಂಗ್ರೆಸ್ ಗೆ ಇದೀಗ ತನ್ನ 'ಸೆಕ್ಯುಲರ್' ನೀತಿಯೇ ಸರಿಯಿಲ್ಲ ಎಂದೆನಿಸಲು ಪ್ರಾರಂಭವಾಗಿದೆ.
ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ಅತಿಯಾಗಿ ಓಲೈಸುತ್ತಿದೆ. ಹಿಂದೂ ವಿರೋಧಿ ಎಂದೇ ಬಿಂಬಿಸಲಾಗಿತ್ತು. ಈಗ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ತಾನು ಹಿಂದೂ ದ್ವೇಷಿನಾ? ಎಂದು ಕಾರ್ಯಕರ್ತರಿಂದ ಪ್ರತಿಕ್ರಿಯೆ ಪಡೆದು, ಹೌದು ಎಂದಾದಲ್ಲಿ ತನ್ನ ನೀತಿಗಳಲ್ಲಿ ಕೆಲ ಬದಲಾವಣೆ ತರಲು ಮುಂದಾಗುವ ಯೋಜನೆ ರೂಪಿಸಿದೆ.