ನವದೆಹಲಿ : ಕೇಂದ್ರ ಸರ್ಕಾರ ಪಾಕಿಸ್ತಾದಿಂದ ಬಂದಿರುವ ಅಲ್ಪಸಂಖ್ಯಾತ ಹಿಂದುಗಳಿಗೆ ಭಾರತೀಯ ಪೌರತ್ವ ನೀಡುವ ವಿಧಾನವನ್ನು ಸುಲಭಗೊಳಿಸಲು ಚಿಂತೆನೆ ನಡೆಸಿದೆ ಎನ್ನಲಾಗಿದೆ.
ಇದಲ್ಲದೇ ದೀರ್ಘಾವಧಿಯ ವೀಸಾದ ಮೇಲೆ ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನಿ ಅಲ್ಪಸಂಖ್ಯಾತರಿಗೆ ಆಸ್ತಿ ಹೊಂದುವ ಮತ್ತು ಬ್ಯಾಂಕ್ ಖಾತೆ ತೆರೆಯುವ, ಪಾನ್ ಕಾರ್ಡ್, ಆಧಾರ್ ಕಾರ್ಡ್, ಪಡೆಯುವ ಅವಕಾಶವನ್ನು ಕಲ್ಪಿಸಲು ಕೇಂದ್ರ ಎನ್.ಡಿ.ಎ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಭಾರತೀಯ ಪ್ರಜೆ ಎಂದು ದಾಖಲಿಸಿಕೊಳ್ಳಲು ನೀಡಬೇಕಾಗಿದ್ದ ಶುಲ್ಕವನ್ನ 15 ಸಾವಿರದಿಂದ 100 ರೂಗೆ ಇಳಿಸುವ ಪ್ರಸ್ತಾಪ ಸಹ ಸರ್ಕಾರದ ಮುಂದಿದೆ.
ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನಗಳಿಂದ ಬಂದು ನಿರಾಶ್ರತರಾಗಿರುವ ಅಲ್ಪಸಂಖ್ಯಾತರು ಸುಮಾರು 2 ಲಕ್ಷ ಜನರಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಅದರಲ್ಲಿ ಹಿಂದೂಗಳು ಮತ್ತು ಸಿಖ್ ಪಂಗಡದವರೇ ಹೆಚ್ಚಾಗಿದ್ದಾರೆ. ಸುಮಾರು 400 ಪಾಕಿಸ್ತಾನಿ ಹಿಂದೂ ನಿರಾಶ್ರಿತರು ಜೋಧ್ ಪುರ, ಜೈಪುರ, ರಾಯ್ ಪುರ, ಅಹಮದಾಬಾದ್, ರಾಜ್ ಕೋಟ್, ಕಚ್, ಭೂಪಾಲ್, ಇಂದೋರ್ ದೆಹಲಿ, ನಾಗಪುರ ಮತ್ತು ಲಕ್ನೋಗಳಲ್ಲಿ ನೆಲೆನಿಂತಿದ್ದಾರೆ.