ವಾರಾಣಸಿ : ಡಿ.25ರಂದು ವಾರಾಣಸಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಸ್ವಚ್ಛ ಭಾರತ ಅಭಿಯಾನ&id=16665'>ಸ್ವಚ್ಛ ಭಾರತ ಅಭಿಯಾನಕ್ಕೆ ಮತ್ತಷ್ಟು ಗಣ್ಯರನ್ನು ನಾಮನಿರ್ದೇಶನ ಮಾಡಿದ್ದಾರೆ.
ಡಿ.25ರಂದು ಭಾರತ ರತ್ನ ಪುರಸ್ಕೃತ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ವಾರಾಣಸಿಗೆ ಭೇಟಿ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸ್ವಚ್ಛ ಭಾರತ ಅಭಿಯಾನ&id=16665'>ಸ್ವಚ್ಛ ಭಾರತ ಅಭಿಯಾನಕ್ಕೆ ಮತ್ತಷ್ಟು ಜನರನ್ನು ನಾಮನಿರ್ದೇಶನ ಮಾಡಿದ್ದಾರೆ.
ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ, ಇಂಡಿಯಾ ಟುಡೆ ಸಂಪಾದಕ ಅರೂನ್ ಪುರೀ, ನಾಗಾಲ್ಯಾಂಡ್ ರಾಜ್ಯಪಾಲ ಪದ್ಮನಾಭ ಆಚಾರ್ಯ, ಈನಾಡು ಸಂಸ್ಥೆ ಮುಖ್ಯಸ್ಥ ರಾಮೂಜಿ ರಾವ್, ಕಪಿಲ್ ಶರ್ಮಾ ಅವರನ್ನು ನಾಮನಿರ್ದೇಶನ ಮಾಡಿದ್ದಾರೆ.
ಈ ಬಾರಿ ಪ್ರಧಾನಿ ಮೋದಿ, ವ್ಯಕ್ತಿಗಳೊಂದಿಗೆ ಕೆಲ ಸಂಸ್ಥೆಗಳನ್ನೂ ಸ್ವಚ್ಛ ಭಾರತ ಆಂಧೋಲನಕ್ಕೆ ನಾಮ ನಿರ್ದೇಶನಗೊಳಿಸಿದ್ದಾರೆ. ಇಂಡಿಯಾ ಟುಡೆ ಸಂಸ್ಥೆ, ಈನಾಡು ಸಂಸ್ಥೆ ಅವುಗಳಲ್ಲಿ ಪ್ರಮುಖವಾಗಿವೆ.