ನವದೆಹಲಿ : 'ಪಾಕಿಸ್ತಾನ'ದ ಪೇಶಾವರ್ ನಲ್ಲಿ ತಾಲೀಬಾನ್ ಉಗ್ರರು ನಡೆಸಿರುವ ಪೈಶಾಚಿಕ ಕೃತ್ಯಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಮುಂಬೈ ದಾಳಿ ರುವಾರಿ ಉಗ್ರ ಹಫೀಸ್ ಸಯ್ಯದ್ ಬಡಬಡಿಸಿದ್ದಾನೆ.
ಮೋದಿಯ ವ್ಯಕ್ತಿತ್ವ ನಿಮ್ಮ ಮುಂದಿದೆ. ಭಾರತ ಏನು ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇಸ್ಲಾಮ್ ನ ಶಕ್ತಿ ಪ್ರದರ್ಶಿಸುವ ಹಾಗೂ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಕಾಲ ಸನ್ನಿಹಿತವಾಗಿದೆ ಎಂದು ಭಯೋತ್ಪಾದಕ ಹಫೀಜ್ ಹೇಳಿದ್ದಾನೆ.
ಅಪ್ಘಾನಿಸ್ತಾನ ಹಾಗು ಪಾಕಿಸ್ತಾನದ ಗಡಿ ಪ್ರದೇಶಗಳು ಉಗ್ರರಿಗೆ ಸ್ವರ್ಗವಾಗಿದೆ ಅಲ್ಲಿ ತರಬೇತಿ ಪಡೆಯುತ್ತಿರುವ ಉಗ್ರರು ಪೇಶಾವರ್ ನಲ್ಲಿ ನಡೆಸಿದಂತಹ ಅಮಾನವೀಯ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಹಫೀಜ್ ಆರೋಪಿಸಿದ್ದಾನೆ.
ಇದೇ ವೇಳೆ ಮೋದಿ ವಿರುದ್ಧ ಆರೋಪ ಮಾಡುತ್ತಿರುವ ಉಗ್ರ ಹಫೀಜ್, ಭಾರತದ ರಾಜಧಾನಿ ನವದೆಹಲಿಯಲ್ಲಿ ಪ್ರತಿಷ್ಠಿತ ಹೊಟೇಲ್ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದಾನೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಮುಂಬೈ ಉಗ್ರರ ದಾಳಿ ಪ್ರಕರಣದಲ್ಲಿ ಹಫೀಜ್ ಸಯ್ಯದ್ ಭಾರತಕ್ಕೆ ಬೇಕಾಗಿರುವ ಉಗ್ರನಾಗಿದ್ದಾನೆ. ಆದರೆ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದು ಪಾಕ್ ಕೂಡ ಆತ ನಿರಪರಾಧಿ ಎಂದು ಹೇಳುತ್ತಿದೆ.