ಹರ್ಯಾಣ : 'ಬಿಬಿಎಂಪಿ'ಯಲ್ಲಿ ಇಲಿಯನ್ನು ಹಿಡಿಯಲು 2 ಲಕ್ಷ ಖರ್ಚಾಗಿರುವ ಕತೆ ಕೇಳಿದ್ದೀರ ಆದರೆ ಆರೋಪಿಯೋರ್ವನನ್ನು ಬಂಧಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿರುವುದನ್ನು ಎಲ್ಲಾದರೂ ಕೇಳಿದ್ದೀರಾ?
ಅಂಥದ್ದೊಂದು ಘಟನೆ ನಡೆದಿದೆ. ವಿವಾಧಿತ ಸ್ವಯಂಘೋಷಿತ ದೇವಮಾನವ ಸಂತ ರಾಮ್ ಪಾಲ್ ಪತ್ತೆ ಮತ್ತು ಬಂಧನಕ್ಕೆ ಬರೋಬ್ಬರಿ 26 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಿಗಿ ಭದ್ರತೆಯೊಂದಿಗೆ ರಾಮ್ ಪಾಲ್ ನನ್ನು ಇಂದು ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಎಂ. ಜಯಪೌಲ್ ಮತ್ತು ದರ್ಶನ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ಹಾಜರು ಪಡಿಸಲಾಯಿತು. ಈ ಸಂದರ್ಭದಲ್ಲಿ ಆತನ ಬಂಧನದ ಸಂದರ್ಭದಲ್ಲಿ ಉಂಟಾಗಿರುವ ಹಾನಿ ಹಾಗೂ ಬಂಧನಕ್ಕೆ ಉಂಟಾಗಿರುವ ಖರ್ಚು ವೆಚ್ಚಗಳ ಮಾಹಿತಿಯನ್ನು ಬಹಿರಂಗಪಡಿಸಲಾಯಿತು.
ಮುಂದಿನ ವಿಚಾರಣೆಯನ್ನು ಡಿಸೆಂಬರ್ 23ರಕ್ಕೆ ಮುಂದೂಡಲಾಗಿದ್ದು, ರಾಮ್ ಪಾಲ್ ಜೊತೆ ಸಹ ಆರೋಪಿಗಳಾದ ರಾಮ್ ಪಾಲ್ ಧಾಕಾ ಮತ್ತು ಒ.ಪಿ. ಹೂಡಾ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ.
ರಾಮ್ ಪಾಲ್ ಬಂಧನಕ್ಕೂ ಮುನ್ನ ಹರ್ಯಾಣದ ಹಿಸ್ಸಾರ್ ನ ಸತ್ ಲೋಕ್ ಆಶ್ರಮಕ್ಕದ ಮುಂದೆ ಭಾರಿ ಪ್ರತಿಭಟನೆ ನಡೆದಿತ್ತು. ಬಳಿಕ ಪ್ರತಿಭಟನೆ ಹಿಂಸಾರೂಪಕ್ಕೆ ತಾಳಿದ್ದು, ಪ್ರತಿಭಟನಾ ನಿರತರನ್ನು ಸ್ಥಳಾಂತರ ಹಾಗೂ ಸಂತ ರಾಮ್ ಪಾಲ್ ಪತ್ತೆಗೆ ಮತ್ತು ಬಂಧನಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವರದಿಯನ್ನು ಹರಿಯಾಣ ಡಿಜಿಪಿ ಎಸ್.ಎನ್ ವಶಿಷ್ಠ ಅವರು ಕೋರ್ಟ್ ಸಲ್ಲಿಸಿದ್ದಾರೆ.