ಅಯೋಧ್ಯೆ : ಒಂದು ಕಾಲದಲ್ಲಿ ಸನಾತನ ಧರ್ಮದ ಅನುಯಾಯಿಗಳಾಗಿದ್ದ ಮುಸ್ಲಿಮರಿಗೆ ಶಿವನೇ ಮೊದಲ ಪ್ರವಾದಿ ಎಂದು ಜಮೇತ್ ಉಲೇಮಾದ ಮುಫ್ತಿ ಮುಹಮ್ಮದ್ ಇಲಿಯಾಸ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಫೆ.27ರಂದು ಕೋಮುಸೌಹಾರ್ದ ಸಮಾವೇಶ ನಡೆಯಲಿದ್ದು, ಈ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಹಿಂದೂ ಸಾಧು, ಸಂತರನ್ನು ಆಹ್ವಾನಿಸಲು ಮುಸ್ಲಿಮ್ ಮೌಲ್ವಿಗಳು ಆಯೋಧ್ಯೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮುಫ್ತಿ ಮುಹಮ್ಮದ್ ಇಲಿಯಾಸ್, ಶಿವ ಮತ್ತು ಪಾರ್ವತಿಯರು ತಮ್ಮೆಲ್ಲರ ಸೃಷ್ಟಿಕರ್ತರು ಎಂದು ಒಪ್ಪಿದ್ದಾರೆ. ಭಾರತ ಹಿಂದೂ ರಾಷ್ಟ್ರ ಎಂಬುದರಲ್ಲಿ ಅನುಮಾನವಿಲ್ಲ, ಭಾರತವನ್ನು ಹಿಂದೂ ರಾಷ್ಟ್ರ ಎಂದು ಹೇಳಲು ನಮ್ಮ ವಿರೋಧವಿಲ್ಲ ಎಂದು ಮುಸ್ಲಿಮ್ ಮೌಲ್ವಿಗಳು ಸ್ಪಷ್ಟಪಡಿಸಿದ್ದಾರೆ.
ಹೇಗೆ ಚೀನಾದಲ್ಲಿರುವವರನ್ನು ಚೀನಿಯರು, ಜಪಾನ್ ನಲ್ಲಿರುವವರನ್ನು ಜಪಾನಿಯರು ಎಂದು ಹೇಳುತ್ತೇವೋ ಹಾಗೆಯೇ ಭಾರತದಲ್ಲಿರುವವರು ಹಿಂದುಗಳಾಗಿದ್ದಾರೆ ಎಂದು ಜಮೇತ್ ಉಲೇಮಾ ಅಭಿಪ್ರಾಯಪಟ್ಟಿದ್ದಾರೆ. ಉತ್ತರಪ್ರದೇಶದ ಬಲರಾಮಪುರದಲ್ಲಿ ಫೆ.27ರಂದು ಈ ಕೋಮುಸೌಹಾರ್ದ ಸಮಾವೇಶ ನಡೆಯಲಿದೆ. ಅಲ್ಲಿ ಎಲ್ಲಾ ಧರ್ಮಗಳ ಪ್ರತಿನಿಧಿಗಳು ಪಾಲ್ಗೊಂಡು ಕೋಮುಸೌಹಾರ್ದ ಸಂದೇಶ ಸಾರುವ ನಿರೀಕ್ಷೆ ಇದೆ.
ಈ ಹಿಂದೆ ರಾಮಮಂದಿರವನ್ನು ಭಾರತದಲ್ಲಲ್ಲದೇ ಮತ್ತೆಲ್ಲಿ ನಿರ್ಮಾಣ ಮಾಡಲು ಸಾಧ್ಯ ಎಂದು ಪ್ರಶ್ನಿಸಿ ರಾಮಮಂದಿರ ನಿರ್ಮಾಣಕ್ಕೆ ಸಹಮತ ವ್ಯಕ್ತಪಡಿಸಿದ್ದಮುಸ್ಲಿಮ್ಂ ಮೌಲ್ವಿಯೊಬ್ಬರು ಎಲ್ಲರ ಹುಬ್ಬೇರುವಂತೆ ಮಾಡಿದ್ದರು.