ನವದೆಹಲಿ : ಭಾರತದ ತೀವ್ರ ವಿರೋಧದ ನಡುವೆಯೂ ಚೀನಾ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಜಲವಿದ್ಯುತ್ ಅಣೆಕಟ್ಟು ನಿರ್ಮಾಣ ಮಾಡಿದ್ದು, ಅಣೆಕಟ್ಟು ಪೂರ್ಣಗೊಂಡಿದೆ ಎಂದು ಘೋಷಿಸಿದೆ.
ಟಿಬೆಟ್ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದ ಜಲವಿದ್ಯುತ್ ಅಣೆಕಟ್ಟು ಪೂರ್ಣಗೊಂಡಿದ್ದು, ಅಣೆಕಟ್ಟಿಗೆ ಯಾರ್ಲಾಂಗ್ ಜಂಗ್ಬೋ ಎಂದು ಹೆಸರಿಡಲಾಗಿದೆ.
ಚೀನಾ ನಿರ್ಮಿಸಿರುವ ಅಣೆಕಟ್ಟಿನಿಂದಾಗಿ ಭಾರತ ಮತ್ತು ಬಾಂಗ್ಲಾದೇಶಗಳು ಆತಂಕಕ್ಕೀಡಾಗಿವೆ. ಚೀನಾ ನಿರ್ಮಿಸಿರುವ ಡ್ಯಾಂನಿಂದಾಗಿ ಭೀಕರ ಪ್ರವಾಹ ಮತ್ತು ಭೂಕೂಸಿತ ಹೆಚ್ಚಾಗುವ ಸಾಧ್ಯತೆ ಇದ್ದು, ಪ್ರಾಣ ಹಾನಿಗೆ ಕಾರಣವಾಗಲಿದೆ ಎಂದು ತಿಳಿದು ಬಂದಿದೆ.
ಅಣೆಕಟ್ಟು ನಿರ್ಮಿಸಬೇಡಿ ಎಂದು ಭಾರತ ಮನವಿ ಮಾಡಿದ್ದರು, ಗಣನೆಗೆ ತೆಗೆದುಕೊಳ್ಳದ ಚೀನಾ, ಅಣೆಕಟ್ಟು ನಿರ್ಮಾಣವನ್ನು ಪೂರ್ಣಗೊಳಿಸಿದೆ. ಅಣೆಕಟ್ಟುಗಳ ನಿರ್ಮಾಣದಿಂದ ಭಾರತಕ್ಕೆ ನೀರಿನ ಹರಿವು ಕಡಿಮೆ ಆಗಲಿದೆ.
ಬ್ರಹ್ಮಪುತ್ರ ನದಿಯಲ್ಲಿ ಅಣೆಕಟ್ಟು ಕಟ್ಟುತ್ತಿರುವ ಚೀನಾದ ಕ್ರಮಕ್ಕೆ ಭಾರತದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ ಇದನ್ನು ಲೆಕ್ಕಿಸದ ಚೀನಾ ಮತ್ತೆ ಮೂರು ಹೊಸ ಅಣೆಕಟ್ಟುಗಳನ್ನು ನಿರ್ಮಿಸಲು ಸಿದ್ಧತೆಗಳನ್ನು ನಡೆಸಿದೆ.