ನವದೆಹಲಿ : ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ರಾಜೀವ್ ಪ್ರತಾಪ್ ರೂಢಿ ಸೋಮವಾರದಿಂದ ಆರಂಭವಾಗಲಿರುವ ಸಂಸತ್ನ ಚಳಿಗಾಲದ ಅಧಿವೇಶನದ ಬಗ್ಗೆ ಚರ್ಚಿಸುವ ಸಲುವಾಗಿ ಭಾನುವಾರ ಸರ್ವ ಪಕ್ಷ ಸಭೆ ಕರೆದಿದ್ದಾರೆ.
ಸಂಸತ್ನ ಸುಗಮ ಕಾರ್ಯ ಕಲಾಪಗಳು ನಡೆಯುವ ಸಲುವಾಗಿ ಸಭೆ ಕರೆಯಲಾಗಿದೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಎಲ್ಲಾ ಪಕ್ಷಗಳು ಪಾಲ್ಗೊಳ್ಳುತ್ತಿದ್ದು, ತೃಣಮೂಲ ಕಾಂಗ್ರೆಸ್ ಅಧಿವೇಶನದ ಮುನ್ನಾದಿನ ಸಭೆ ಕರೆದಿರುವ ಹಿನ್ನಲೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ತಿಳಿದು ಬಂದಿದೆ.
ಚಳಿಗಾಲದ ಅದಿವೇಶನ ನವೆಂಬರ್ 24 ರಂದು ಆರಂಭವಾಗಿ ಡಿಸೆಂಬರ್ 23 ರಂದು ಮುಕ್ತಾಯವಾಗಲಿದೆ. ಒಟ್ಟು 22 ದಿನ ಕಲಾಪ ನಡೆಯಲಿವೆ.