ನವದೆಹಲಿ : ದೇಶದ ಮೊದಲ ಪ್ರಧಾನಿ ಜವಹರ ಲಾಲ್ ನೆಹರು ಅವರ 125ನೇ ಜನ್ಮದಿನಾಚರಣೆ ಅಂಗವಾಗಿ ನವದೆಹಲಿಯಲ್ಲಿ ಆಯೋಜಿಸಿರುವ ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ನೆಹರು ಅವರು ಆಧುನಿಕ ಭಾರತದ ಜನಕ, ದೇಶದ ಅಭಿವೃದ್ಧಿಗೆ ಅವರ ಕೊಡುಗೆ ಮಹತ್ವದ್ದು ಎಂದು ಅಭಿಪ್ರಾಯಪಟ್ಟರು.
ಔದ್ಯೋಗಿಕರಣ, ಅಭಿವೃದ್ಧಿಗಾಗಿ ನೆಹರು ಶ್ರಮಿಸಿದ್ದಾರೆ. ಅವರು ದೇಶದ ಎಲ್ಲಾ ಮತ-ಧರ್ಮದವರನ್ನು ಸಮಾನ ಗೌರವದಿಂದ ಕಾಣುತ್ತಿದ್ದರು. ದೇಶದ ಸಮಗ್ರತೆಗೆ ಜಾತ್ಯಾತೀತತೆ ಅಗತ್ಯ ಎಂದು ತಿಳಿಸಿದರು.