ಬ್ರಿಸ್ಬೇನ್ : ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಬ್ರಿಸ್ಪೇನ್ ನಲ್ಲಿ ಗಾಂಧಿ ಪ್ರತಿಮೆ ಅನಾವರಣ ಮಾಡಿದರು.
ಜಿ-20 ಶೃಂಗ ಸಭೆಯಲ್ಲಿ ಭಾಗವಹಿಸಿದ ಬಳಿಕ ಪ್ರಧಾನಿ ಮೋದಿ ರೋಮ್ ಸ್ಟ್ರೀಟ್ ಪಾರ್ಕ್ಲ್ಯಾಂಡನಲ್ಲಿ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿ, ಪುಷ್ಪ ನಮನ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಆಸ್ಟ್ರೇಲಿಯಾ ಪ್ರವಾಸದಲ್ಲಿ ಇದು ಮರೆಯಲಾಗದ ಕ್ಷಣ. ಗಾಂಧಿ ಪ್ರತಿಮೆ ನಿರ್ಮಿಸಲು ಅವಕಾಶ ನೀಡಿದ್ದಕ್ಕೆ ಇಲ್ಲಿನ ಅಧಿಕಾರಿಗಳಿಗೆ ನನ್ನ ಅಭಿನಂದನೆ ಎಂದು ತಿಳಿಸಿದರು.
ಗಾಂಧಿ ಪ್ರಕೃತಿಯ ಪ್ರೇಮಿಯಾಗಿದ್ದರು. ಅದೇ ರೀತಿ ಪ್ರಕೃತಿಯ ರಕ್ಷಣೆಗೆ ಮುಂದಾಗಿದ್ದರು. ನೀರನ್ನು ವ್ಯರ್ಥ ಮಾಡಬಾರದು ಎಂದು ಗಾಂಧಿ ಕರೆ ನೀಡಿದ್ದರು. ಗಾಂಧಿಯವರ ಈ ನಡೆಯನ್ನು ನಾವು ಅನುಸರಿಸಿ, ಪ್ರಕೃತಿಯನ್ನು ರಕ್ಷಿಸಬೇಕು ಎಂದು ಕರೆ ನೀಡಿದರು.
ಅಹಿಂಸೆ ಗಾಂಧಿ ಅವರ ಮಾರ್ಗ. ಗಾಂಧಿ ತತ್ವ ಆದರ್ಶಗಳನ್ನು ನಂಬಿದ್ದೇನೆ. ಎಲ್ಲರೂ ಗಾಂಧಿ ತತ್ವಾದರ್ಶವನ್ನು ಪಾಲಿಸಬೇಕು ಎಂಬುದು ನನ್ನ ಆಶಯವಾಗಿದೆ ಎಂದು ತಿಳಿಸಿದರು.