ನವದೆಹಲಿ : 'ಕೇಂದ್ರ ಸಚಿವ ಸಂಪುಟ ವಿಸ್ತರಣೆ'ಯ ನಂತರ ಪ್ರಥಮ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ನ.10ರಂದು ಸಚಿವ ಸಂಪುಟ ಸಭೆ ನಡೆಸಲಿದ್ದಾರೆ.
ಸಂಜೆ 5:30ಕ್ಕೆ ಸಚಿವ ಸಂಪುಟ ಸಭೆ ನಡೆಯಲಿದೆ ಎಂದು ಸರ್ಕಾರದ ಉನ್ನತ ಮೂಕಗಳು ತಿಳಿಸಿವೆ. ನ.9ರಂದು ಸಚಿವ ಸಂಪುಟ ವಿಸ್ತರಣೆಯಾಗಿದ್ದು, 22 ಹೊಸ ಮಂತ್ರಿಗಳು ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಸರ್ಕಾರ ರಚನೆಯಾದಾಗಿನಿಂದಲೂ ಅರುಣ್ ಜೇಟ್ಲಿ ಹೆಚ್ಚುವರಿಯಾಗಿ ನಿಭಾಯಿಸಿದ್ದ ರಕ್ಷಣಾ ಖಾತೆಯನ್ನು ಮನೋಹರ್ ಪರೀಕ್ಕರ್ ಅವರಿಗೆ ನೀಡಲಾಗಿದೆ. ಇದೇ ವೇಳೆ ಶಿವಸೇನೆಗೆ ಎನ್.ಡಿ.ಎ ಸರ್ಕಾರ ಕೊನೆ ಘಳಿಗೆಯಲ್ಲಿ ಶಾಕ್ ನೀಡಿದೆ.
ರಾಮ್ ಕೃಪಾಲ್ ಯಾದವ್, ಮುಖ್ತಾರ್ ಅಬ್ಬಾಸ್ ನಖ್ವಿ, ಗಿರಿರಾಜ್ ಸಿಂಗ್, ವೈ.ಎಸ್.ಚೌದರಿ, ಹರಿಭಾಯ್ ಪಿ.ಚೌದರಿ, ಜಯಂತ್ ಸಿನ್ಹಾ, ಪ್ರೊ.ರಾಮ್ ಶಂಕರ್ ಕಟಾರಿಯಾ, ರಾಜ್ಯವರ್ಧನ್ ಸಿಂಗ್ ರಾಥೋಡ್,ಸಾದ್ವಿ ನಿರಂಜನ್ ಜ್ಯೋತಿ, ವಿಜಯ್ ಸಾಂಪ್ಲಾ, ಬಾಬುಲ್ ಸುಪ್ರಿಯೋ, ಮನೋಹರ್ ಭಾಯ್ ಕುಂಡರಿಯ, ಸನ್ವರ್ ಲಾಲ್ ಜಾಟ್, ಹನ್ಸರಾಜ್ ಅಹಿರ್ ರಾಜ್ಯ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ನೂತನ ಮಂತ್ರಿಗಳು ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೇಂದ್ರ ಸಚಿವ ಸಂಪುಟ ಹಿಗ್ಗಿರುವ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಸಭೆ ಮಹತ್ವ ಪಡೆದುಕೊಂಡಿದೆ.