ನವದೆಹಲಿ : 'ತೀರ್ಥಹಳ್ಳಿ'ಯಲ್ಲಿ ಅ.31ರಂದು ಅತ್ಯಾಚಾರಕ್ಕೀಡಾಗಿ ಮೃತಪಟ್ಟ ಬಾಲಕಿ ಪ್ರಕರಣ&id=16126'>ನಂದಿತಾ ಪ್ರಕರಣಕ್ಕೆ ಪೊಲೀಸರು ಹೊಸ ಟ್ವಿಸ್ಟ್ ನೀಡಿದ್ದಾರೆ. ಬಾಲಕಿ ನಂದಿತಾ ಮೇಲೆ ರೇಪ್ ನಡೆದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಂದಿತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಂದೆ ದಾಖಲಿಸಿರುವ ದೂರಿನಲ್ಲಿ ರೇಪ್ ನಡೆದಿರುವ ಪ್ರಸ್ತಾಪವೇ ಇಲ್ಲ. ಆದರೆ ದೂರಿನಲ್ಲಿ ಹತ್ಯೆ ಮಾಡಲು ಯತ್ನಿಸಿರುವ ಬಗ್ಗೆ ಪ್ರಸ್ತಾಪವಿದೆ. ಈ ಹಿನ್ನೆಲೆಯಲ್ಲಿ ಮೃತಪಟ್ಟ ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಪೊಲೀಸರು ಶಂಕಿಸಿದ್ದಾರೆ.
ಅಲ್ಲದೇ ನ.3ರಂದು ಬಾಲಕಿ ಸಾವಿಗೆ ಹೊಸ ಟ್ವಿಸ್ಟ್ ನೀಡಿರುವ ಪೊಲೀಸರು, ಮೃತ ಬಾಲಕಿಯ ಸ್ಕೂಲ್ ಬ್ಯಾಗ್ ನಲ್ಲಿ ಡೆತ್ ನೋಟ್ ಸಿಕ್ಕಿದೆ ಎಂದು ಹೇಳಿದ್ದಾರೆ. ರೇಪ್ ಅಥವಾ ಕೊಲೆ ಯತ್ನ ನಡೆದಿದೆ ಎಂಬ ಆಪಾದನೆಯನ್ನು ತಳ್ಳಿಹಾಕಿ ಇದು ಆತ್ಮಹತ್ಯೆ ಪ್ರಕರಣ ಎಂದು ಪ್ರಕರಣ ನಡೆದ 4 ದಿನಗಳ ನಂತರ ಹೇಳಿರುವುದು ಸಂತ್ರಸ್ತ ಬಾಲಕಿಯ ಕುಟುಂಬದ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.
ಅಲ್ಲಿನ ಶಾಸಕ ಮತ್ತು ರಾಜ್ಯ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ವದಂತಿಗಳನ್ನು ಹಬ್ಬಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಜನರನ್ನು ಖಂಡಿಸಿ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.