ನವದೆಹಲಿ : ಬಿಜೆಪಿ ಹಿರಿಯ ನಾಯಕರೊಬ್ಬರು ದೆಹಲಿಯ ಪ್ರತಿ ಕ್ಷೆತ್ರದಲ್ಲು ನಕಲಿ ಮತದಾರರನ್ನು ಸೃಷ್ಠಿಸಿ ಗೆಲ್ಲಲು ತನ್ನ ಅಭ್ಯರ್ಥಿಗಳಿಗೆ ಸುಚಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೆಜ್ರಿವಾಲ್ ಆರೊಪ ಮಾಡಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅರವಿಂದ್ ಕೆಜ್ರಿವಾಲ್, ಬಿಜೆಪಿ ಹಿರಿಯ ನಾಯಕರೊಬ್ಬರು ದೆಹಲಿಯ ತನ್ನೆಲ್ಲಾ ಶಾಸಕರಿಗೆ ಎಲ್ಲಾ ಕ್ಷೇತ್ರಗಲಲ್ಲೂ ಕನಿಷ್ಠ 5000 ನಕಲಿ ಮತಗಳನ್ನು ಸೃಷ್ಠಿಸಿ ಗೆಲ್ಲಲು ಸೂಚನೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೇ ಎಎಪಿಯ ಮತಗಳನ್ನು ಪಟ್ಟಿಯಿಂದ ತೆಗೆದುಹಾಕುವಂತೆಯೂ ಅವರು ಸೂಚನೆ ನೀಡಿದ್ದಾರೆ ಎಂದು ಕೇಜ್ರಿವಾಲ್ ಆರೊಪಿಸಿದ್ದಾರೆ.
ಒಂದು ನಕಲಿ ಮತಕ್ಕೆ 1500 ರೂ, ಒಂದು ಮತವನ್ನು ಪಟ್ಟಿಯಿಂದ ತೆಗೆಯಲು 200 ರೂ. ಕಳೆದ ವಾರ ಬಿಜೆಪಿ ಗೆ ಈ ಕೆಲಸ ಮಾಡಿದವನೇ ಈ ವಿಷಯ ಹೇಳಿದ್ದು" ಎಂದು ಮತ್ತೊಂದು ಟ್ವೀಟ್ ನಲ್ಲಿ ದೂರಿದ್ದಾರೆ. ಅ.27ರಂದು ಬೆಳಿಗ್ಗೆ 11ಗಂಟೆಗೆ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿ ಅಧಿಕೃತವಾಗಿ ದೂರು ನೀಡುತ್ತಿರುವುದಾಗಿಯೂ ತಿಳಿಸಿದ್ದಾರೆ.
ಆದರೆ ಬಿಜೆಪಿ ಈ ಅರೋಪವನ್ನು ತಳ್ಳಿಹಾಕಿದೆ. ಕೇಜ್ರಿವಾಲ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿ ಜಾಲಗಳಲ್ಲಿ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆವರು ಬಿಜೆಪಿ ವಿರುದ್ಧ ಸಲ್ಲದ ಆಪಾದನೆ ಮಾಡುತ್ತಿರುವುದು ಏಕೆಂದರೆ, ನಾವು ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡರೆ ಅವರು ಮತ್ತೆ ಸುದ್ದಿಯಲ್ಲಿರಬಹುದೆಂಬ ಆಸೆಯಿಂದ. ಆದರೆ ನಾವು ಆ ಅವಕಾಶ ಕೊಡುವುದಿಲ್ಲ" ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಸತೀಶ್ ಉಪಾಧ್ಯಾಯ ಹೇಳಿದ್ದಾರೆ.