ಕೇರಳ : ನಾಥೂರಾಮ್ ಗೋಡ್ಸೆ ಗಾಂಧೀಜಿಯವರನ್ನು ಕೊಲ್ಲುವ ಬದಲು ನೆಹರು ಅವರನ್ನು ಕೊಲ್ಲಬೇಕಿತ್ತು ಎಂದು ಕೇರಳ ಆರ್.ಎಸ್.ಎಸ್ ಘಟಕ ವಿವಾದಾತ್ಮಕ ಲೇಖನ ಬರೆದಿದೆ.
ಆರ್.ಎಸ್.ಎಸ್ ಮುಖವಾಣಿ ಕೇಸರಿಯಲ್ಲಿ ಕೇರಳ ಆರ್.ಎಸ್.ಎಸ್ ಮುಖಂಡ ಗೋಪಾಲಕೃಷ್ಣನ್, ಇಂತದ್ದೊಂದು ಲೇಖನ ಬರೆದಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ನಾಥೂರಾಮ್ ಗೋಡ್ಸೆ ನೆಹರು ಅವರನ್ನು ಹತ್ಯೆ ಮಾಡಬೇಕಿತ್ತು, ಗಾಂಧೀಜಿಯನ್ನು ಆಯ್ಕೆ ಮಾಡಿಕೊಂಡಿದ್ದು ತಪ್ಪು ಎಂದು ಹೇಳಿದ್ದಾರೆ.
ಜವಹರ ಲಾಲ್ ನೆಹರು ಅವರು ತುಂಬಾ ಸ್ವಾರ್ಥಿಯಾಗಿದ್ದರು, ದೇಶದಲ್ಲಿನ ಹಲವು ದುರಂತಗಳಿಗೆ ಅವರೇ ಕಾರಣರು. ದೇಶ ವಿಭಜನೆಗೆ ನೆಹರು ಅವರೇ ಪ್ರಮುಖ ಕಾರಣರು. ಹೀಗಾಗಿ ನಾಥೋರಾಮ್ ಗೋಡ್ಸೆ, ಗಾಂಧೀಜಿಯವರನ್ನು ಕೊಲ್ಲುವ ಬದಲು ನೆಹರು ಅವರನ್ನು ಹತ್ಯೆ ಮಾಡಬೇಕಿತ್ತು ಎಂದು ಲೇಖನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗೋಪಾಲಕೃಷ್ಣನ್ ಅವರ ಈ ಲೇಖನ ಈಗ ತೀವ್ರ ಚರ್ಚೆಗೆ ಕಾರಣವಾಗಿದ್ದು, ಇಂತಹ ಪ್ರಚೋದನಾತ್ಮಕ ಲೇಖನ ಬರೆದಿರುವ ಗೋಪಾಲಕೃಷ್ಣನ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಕೇರಳ ಕಾಂಗ್ರೆಸ್ ಘಟಕ ಎಂದು ಒತ್ತಾಯಿಸಿದೆ.