ನವದೆಹಲಿ : ನಾನು ಎಂದಿಗೂ ಒಳ್ಳೆಯ ವಿದ್ಯಾರ್ಥಿಯಾಗಿರಲಿಲ್ಲ,ಪ್ರಶಸ್ತಿಗಳನ್ನೂ ಪಡೆದಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯ ಏಮ್ಸ್ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಪದಕ ಪ್ರದಾನ ಮಾಡಿದ ಪ್ರಧಾನಿ ಮೋದಿ, ತಮ್ಮ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದರು. ನಾನು ಒಳ್ಳೆಯ ವಿದ್ಯಾರ್ಥಿಯಾಗಿರಲಿಲ್ಲ, ಯಾವುದೇ ಪ್ರಶಸ್ತಿಗಳನ್ನು ಗಳಿಸಿರಲಿಲ್ಲ ಎಂದು ತಿಳಿಸಿದರು.
ವಿದ್ಯಾರ್ಥಿ ಜೀವನವನ್ನು ತುಂಬಾ ಗಂಭೀರವನ್ನಾಗಿ ಮಾಡಿಕೊಳ್ಳಬಾರದು. ಬಡ ಮಕ್ಕಳನ್ನೂ ಘಟಿಕೋತ್ಸವಕ್ಕೆ ಕರೆತರಬೇಕು. ಅವರಿಗೂ ಹೆಚ್ಚಿನ ಅವಕಾಶ ಸಿಗುವಂತಾಗಬೇಕು ಎಂದರು.
ಸೂಜಿ ಎಷ್ಟು ಚಿಕ್ಕದಾಗಿದೆಯೋ ಅಷ್ಟೇ ಶಕ್ತಿಶಾಲಿಯಾಗಿದೆ ಎಂದ ಮೋದಿ ವಿದ್ಯಾರ್ಥಿಗಳಿಗೆ ಜ್ನಾನದ ಹಸಿವು ಇರಬೇಕು. ನಮ್ಮ ಮನಸ್ಸಿನಲ್ಲಿರುವ ವಿದ್ಯಾರ್ಥಿ ಎಂದಿಗೂ ಜೀವಂತವಾಗಿರಬೇಕು. ವಿದ್ಯಾರ್ಥಿಗಳಲ್ಲಿ ಪ್ರತಿ ಕ್ಷಣವೂ ಎನನ್ನಾದರೂ ಸಾಧಿಸಬೇಕೆಂಬ ಛಲವಿರಬೇಕು ಎಂದು ಕಿವಿಮಾತು ಹೇಳಿದರು.
ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ, ಅವಕಾಶ ಕಡಿಮೆಯಿರಬಹುದು ಆದರೆ ಬಡ ವಿದ್ಯಾರ್ಥಿಗಳನ್ನು ಬೆಳೆಸುವುದು ನಮ್ಮ ಕರ್ತವ್ಯ ಎಂದು ಮೋದಿ ತಿಳಿಸಿದರು.