ಚೆನ್ನೈ : ನನ್ನ ಸಾರ್ವಜನಿಕ ಜೀವನ ಬೆಂಕಿಯ ಕಡಲಲ್ಲಿ ಈಜಿದಂತೆ, ಆದರೂ ಎಂದಿಗೂ ನಾನು ಅಳುಕುವುದಿಲ್ಲ ಎಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಹೇಳಿದ್ದಾರೆ.
66.65ಕೋಟಿ ರೂ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲುಶಿಕ್ಷೆಗೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡು ಒಂದು ದಿನದ ಬಳಿಕ ಜಯಲಲಿತಾ ಹೇಳಿಕೆ ನೀಡಿದ್ದಾರೆ. ನನ್ನ ಸಾರ್ವಜನಿಕ ಜೀವನ ಬೆಂಕಿಯ ಕಡಲಲ್ಲಿ ಈಜಿದಂತೆ. ಸುದೀರ್ಘ ಕಾಲದಿಂದ ಸವಾಲುಗಳನ್ನು ಎದುರಿಸುತ್ತಾ ಯಶಸ್ವಿಯಾಗಿ ದಾಟಿ ಬಂದಿದ್ದೇನೆ. ತಮಿಳುನಾಡಿದ ಜನರ ಪ್ರೀತಿ ಮತ್ತು ಭಾರೀ ಬೆಂಬಲ ಇರುವುದರಿಂದ ತಾವು ಮಣಿಯುವುದಿಲ್ಲ ಎಂದು ತಿಳಿಸಿದ್ದಾರೆ.
ತಮ್ಮ ಕಾರಾಗ್ರಹ ವಾಸ ಪರಿಸ್ಥಿತಿಗಾಗಿ 193 ಜನರು ಸಾವನ್ನಪ್ಪಿದ್ದಾರೆ. ಮೂವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಕುರಿತು ಸಂತಾಪವಿದೆ ಎಂದಿರುವ ಜಯಲಲಿತಾ ತಲಾ 3 ಲಕ್ಷ ಪರಿಹಾರ ಪ್ರಕಟಿಸಿದ್ದಾರೆ.