ಲಾಹೋರ್ : 'ಭಾರತ', ಪಾಕಿಸ್ತಾನದ ಮೇಲೆ ನಡೆಸಿರುವ ಪ್ರತಿದಾಳಿಗೆ ಬೆಚ್ಚಿರುವ ಪಾಕಿಸ್ತಾನ, ಭಾರತ ತನ್ನ ಮೇಲೆ ನಡೆಸಿದ್ದು ಸಣ್ಣ ಪ್ರಮಾಣದ ಯುದ್ಧ ಎಂದು ಆರೋಪಿಸಿದೆ.
ಸಿಯಾಲ್ಕೋಟ್ ಗಡಿ ಪ್ರದೇಶದಲ್ಲಿ ಭಾರತ ನಡೆಸಿರುವ ದಾಳಿಯನ್ನು ಸಣ್ಣ ಪ್ರಮಾಣದ ಯುದ್ಧವೆಂದು ಹೇಳಿರುವ ಡೈರೆಕ್ಟರ್ ಜನರಲ್ ಹಾಗೂ ರೇಂಜರ್ಸ್ ಮೇಜರ್ ಜನರಲ್ ತಾಹಿರ್ ಜಾವೇದ್ ಖಾನ್, ಇದರ ಹಿಂದೆ ರಾಜಕೀಯ ಕಾರ್ಯಸೂಚಿ ಇದ್ದಂತಿದೆ ಎಂದು ಹೇಳಿದ್ದಾರೆ.
ಭಾರತೀಯ ಬಿ.ಎಸ್.ಎಫ್ ಯೋಧರು ಸಣ್ಣ ಬಂದೂಕುಗಳನ್ನು ಬಳಸಿದ್ದಾರೆ. ಅಲ್ಲದೇ 30,000 ಮೋಟಾರ್ ಶೆಲ್ ಗಳನ್ನು ಬಳಸಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದಾರೆ. ಇಷ್ಟೊಂದು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪೂರ್ಣ ಪ್ರಮಾಣದ ಯುದ್ಧದಲ್ಲೂ ಬಳಸುವುದಿಲ್ಲ ಎಂದು ಜಾವೇದ್ ಖಾನ್ ಪಾಕಿಸ್ತಾನದ ಮಾಧ್ಯಮಗಳೆದುರು ಅಳಲು ತೋಡಿಕೊಂಡಿದ್ದಾರೆ.
ಭಾರತೀಯ ಸೈನಿಕರು ಅ.6ರಂದು ಒಂದೇ ದಿನ 51,000 ಸಣ್ಣ ಬಂದೂಕುಗಳಿಂದ ಗಡಿ ಭಾಗದಲ್ಲಿ ಪ್ರತಿ ದಾಳಿ ನಡೆಸಿದ್ದಾರೆ. ಆ ನಂತರ ಅ.7ರಂದು 4,000 ಶೆಲ್ ಗಳಿಂದ ದಾಳಿ ನಡೆಸಿದ್ದಾರೆ ಎಂದು ತಾಹಿರ್ ಜಾವೇದ್ ಖಾನ್ ಆರೋಪಿಸಿದ್ದಾರೆ.