ಭೋಪಾಲ್ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹವಾ ಬಾಜಿ ಟೀಕೆಗೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿದಾಳಿ ನಡೆಸಿದ್ದು, ಹವಾಲಾ ಬಾಜ್ ಅವರಿಗೆ ಚಿಂತೆಯಾಗಿದೆ ಅವರು ದೇಶದ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ಜಿ ಎಸ್ ಟಿ ಯೋಜನೆ ಅನುಮೋದನೆಗೆ ಅಡ್ಡಿಪಡಿಸಿದ ಕಾಂಗ್ರೆಸ್ ನ ಮೇಲೆ ಪ್ರಧಾನಿ ಮೋದಿ ಗುರುವಾರ ಹರಿಹಾಯ್ದರು.
ಭೋಪಾಲ್ ನಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಾಮಾನ್ಯವಾಗಿ ಎಲ್ಲಾ ಪಕ್ಷಗಳೂ ಸಂಸತ್ತ್ ಕಲಾಪ ಸುಗಮವಾಗಿ ನಡೆಯಬೇಕು ಮತ್ತು ನಿರ್ಧಾರಗಳನ್ನು ತೆಗೆದುಕೊೞಬೇಕೆಂಬುದಕ್ಕೆ ಒಪ್ಪಿಗೆ ಸೂಚಿಸಿದ್ದವು. ಆದರೆ ಕಾಂಗ್ರೆಸ್ ಒಂದು ಪಕ್ಷ ಮಾತ್ರ ಇದಕ್ಕೆ ಯಾವತ್ತೂ ಒಪ್ಪಿಗೆ ಸೂಚಿಸಲಿಲ್ಲ ಎಂದು ಹೇಳಿದರು.
ಎನ್ ಡಿ ಎ ಸರ್ಕಾರ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ಮಾತ್ರ ನೀಡುತ್ತದೆ, ಘೋಷಣೆ ಮಾಡಿದ್ದನ್ನು ಕಾರ್ಯಗತಗೊಳಿಸುವುದಿಲ್ಲ ಎಂಬ ಸೋನಿಯಾ ಗಾಂಧಿ ಅವರ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಪ್ರಧಾನಿ ಮೋದಿ, ಈ ಸರ್ಕಾರ ಹೇಳಿಕೆಗಳನ್ನು ಮಾತ್ರ ನೀಡುವುದಿಲ್ಲ ಜೊತೆಗೆ ಅದನ್ನು ಕಾರ್ಯಗತಗೊಳಿಸಲು ನಮ್ಮ ಹತ್ತಿರ ಮಾರ್ಗಸೂಚಿ ಇದೆ ಎಂದು ಹೇಳಿದರು.
ಭಾರತ ಮುಂದುವರಿಯಬೇಕಾಗಿದೆ, ಜಾಗತಿಕ ಆರ್ಥಿಕ ಪರಿಸ್ಥಿತಿಯ ಮಧ್ಯೆಯೂ ಭಾರತ ಸ್ಥಿರವಾಗಿದೆ. ಇಂತಹ ಅವಕಾಶಗಳನ್ನು ಕಳೆದುಕೊೞ್ಬಾರದು, ಸಂಸತ್ತ್ ಕೆಲಸ ಮಾಡುಲು ಬಿಡಿ ಎಂದು ಪ್ರಧಾನಿ ಹೇಳಿದರು.
ಕಳೆದ ಚುನಾವಣೆಯಲ್ಲಿನ ಕಾಂಗ್ರೆಸ್ ನ ಸೋಲನ್ನು ನೆನೆಪಿಸಿದ ಪ್ರಧಾನಿ ಮೋದಿ, ನಮಗೆ ಈಗ ಬಹುಮತವಿದೆ, ಆದರೆ ಕಾಂಗ್ರೆಸ್ 400 ಸ್ಥಾನ್ಗಳಿಂದ 40 ಸ್ಥಾನಗಳಿಗೆ ಕುಸಿದಿದೆ ಎಂದು ಹೇಳಿದರು.