ನವದೆಹಲಿ : ಸ್ವಚ್ಛ ಭಾರತ ಅಭಿಯಾನದಲ್ಲಿ ಭಾಗಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಆಹ್ವಾನವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಸ್ವೀಕರಿಸಿದ್ದಾರೆ.
ಪ್ರಧಾನಿ ಮೋದಿ ನನ್ನ ಹೆಸರು ಸೂಚಿಸಿದಾಗ ನಾನು ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ. ಹೀಗಾಗಿ ತಕ್ಷಣಕ್ಕೆ ಈ ಕುರಿತು ಪ್ರತಿಕ್ರಿಯೆ ನೀಡಲು ಸಾಧ್ಯವಾಗಲಿಲ್ಲ, ನನಗೆ ನೀಡಿದ ಆಹ್ವಾನವನ್ನು ಗೌರವ ಪೂರ್ವಕವಾಗಿ ಸ್ವೀಕರಿಸುತ್ತೇನೆ ಎಂದಿದ್ದಾರೆ.
ವಿದೇಶ ಪ್ರವಾಸದಿಂದ ಮರಳಿದ ಬಳಿಕ ಆಂದೋಲನದಲ್ಲಿ ಭಾಗಿಯಾಗುತ್ತೇನೆ. ಸ್ವಚ್ಛತಾ ಅಭಿಯಾನ ಸಮರ್ಥನೀಯ ಕಾರ್ಯಕ್ರಮವಾಗಬೇಕೇ ಹೊರತು ತೊರಿಕೆಯ ವಿಷಯವಾಗಿ ಉಳಿಯಬಾರದು. ಹಾಗಿರುವವರೆಗೂ ಇದಕ್ಕೆ ತಮ್ಮ ಬೆಂಬಲವಿದೆ ಎಂದು ತರೂರ್ ಟ್ವಿಟ್ ಮಾಡಿದ್ದಾರೆ.
ಈ ಮಧ್ಯೆ ಪ್ರಧಾನಿ ಮೋದಿ ನೀಡಿರುವ ಅಹ್ವಾನ ಕುರಿತು ನಟ ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದು, ನನಗೆ ಆಹ್ವಾನ ನೀಡಿರುವುದಕ್ಕೆ ಧನ್ಯವಾದಗಳು. ನಾನು ಕಳೆದ 20 ವರ್ಷಗಳಿಂದ ಇಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನದು ಪ್ರಚಾರದ ಉದ್ದೇಶವಲ್ಲದ, ಪಕ್ಷಾತೀತವಾದ ಸೇವೆ ಎಂದು ತಿಳಿಸಿದ್ದಾರೆ.