Untitled Document
Sign Up | Login    
Dynamic website and Portals
  
October 1, 2014

ಪ್ರಧಾನಿ ಮೋದಿ-ಒಬಾಮ ಭೇಟಿ: ಸ್ಮಾರ್ಟ್ ಸಿಟಿಗೆ ನೆರವು

ಉಗ್ರರ ನಿರ್ಮೂಲನೆಗೆ ಉಭಯ ನಾಯಕರ ಪಣ

ಪ್ರಧಾನಿ ನರೇಂದ್ರ ಮೋದಿ-ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಪ್ರಧಾನಿ ನರೇಂದ್ರ ಮೋದಿ-ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ

ವಾಷಿಂಗ್ಟನ್ : ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಇದೀಗ ಅಮೆರಿಕಾ ಕೂಡ ನೆರವು ನೀಡಲಿದೆ. ಅಲಹಾಬಾದ್, ಅಜ್ಮೀರ್ ಮತ್ತು ವಿಶಾಖಪಟ್ಟಣಂ ನಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಅಮೆರಿಕಾ ಸಹಾಯ ನೀಡಲಿದೆ.

ಶ್ವೇತಭವನದಲ್ಲಿ ಸೆ.30ರಂದು ಸುಮಾರು 90 ನಿಮಿಷಗಳ ಕಾಲ ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಐತಿಹಾಸಿಕ ಮಾತುಕತೆ ನಡೆಸಿದ ಬಳಿಕ ಸ್ಮಾರ್ಟ್ ಸಿಟಿ ನೆರವಿನ ಘೋಷಣೆ ಮಾಡಲಾಗಿದೆ.

ಸ್ಥಳೀಯ ಆಡಳಿತದ ಸಹಭಾಗಿತ್ವದೊಂದಿಗೆ ಶುದ್ಧ ಕುಡಿಯುವ ನೀರು ಮತ್ತು ಚರಂಡಿ ಸೌಲಭ್ಯಗಳನ್ನು 500 ನಗರಗಳಲ್ಲಿ ಕೈಗೊಳ್ಳಲು ಹಣಕಾಸಿನ ನೆರವು ನೀಡುವುದಾಗಿ ಅಮೆರಿಕಾ ಭರವಸೆ ನೀಡಿದೆ.

ಉಭಯ ನಾಯಕರ ಮಾತುಕತೆ ವೇಳೆ ಅಮೆರಿಕಾ-ಭಾರತ ಬಾಂಧವ್ಯ ವೃದ್ಧಿ, ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರ ಒಪ್ಪಂದ 10 ವರ್ಷ ವಿಸ್ತರಣೆ, ಅಣು, ಬಾಹ್ಯಾಕಾಶ ಕ್ಷೇತ್ರದಲ್ಲಿ ಸಹಕಾರಕ್ಕೆ ಸಮ್ಮತಿ ನೀಡಲಾಯಿತು.

ಇದೇ ವೇಳೆ ಭೂಗತ ಪಾತಕಿ ದಾವೂದ್ ಗ್ಯಾಂಗ್, ಲಷ್ಕರ್ ಸೇರಿ ಹಲವು ಉಗ್ರಗಾಮಿ ಸಂಘಟನೆ ನಿರ್ಮೂಲನೆಗೆ ಜಂಟಿ ಹೋರಾಟ ನಡೆಸುವ ಬಗ್ಗೆಯೂ ಮೋದಿ, ಒಬಾಮ ಪಣತೊಟ್ಟರು.

ದ್ವಿಪಕ್ಷೀಯ ಮಾತುಕತೆ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಉಭಯ ನಾಯಕರು, ಅಮೆರಿಕಾ ಮತ್ತು ಭಾರತದ ಉಪಗ್ರಹಗಳು ಮಂಗಳನಲ್ಲಿ ಯಶಸ್ವಿಯಾಗಿ ಭೇಟಿಯಾದ ಬಳಿಕ ಕೆಲವೇ ದಿನಗಳಲ್ಲಿ ಭೂಮಿಯಲ್ಲಿ ನಾವು ಯಶಸ್ವಿ ಮಾತುಕತೆ ನಡೆಸಿದ್ದೇವೆ. ಈ ಮಾತುಕತೆಯ ಅನ್ವಯ ನಾಗರಿಕ ಪರಮಾಣು ಒಪ್ಪಂದದಲ್ಲಿನ ಅಡ್ಡಿಗಳನ್ನು ನಿವಾರಿಸಿ, ಹೊಸ ಸಾಧ್ಯತೆಯತ್ತ ಮುಂದುವರೆಸಲೂ ನಾವು ಬದ್ಧರಾಗಿದ್ದೇವೆ. ದಕ್ಷಿಣ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಇತರೆಡೆ ಭಯೋತ್ಪಾದನೆಯ ಸವಾಲುಗಳನ್ನು ಮಟ್ಟಹಾಕಲು ನಾವು ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು.

ಅಲ್ಲದೇ ಗುಪ್ತಚರ ಮಾಹಿತಿಗಳನ್ನು ಹಂಚುವ ವಿಚಾರದಲ್ಲಿಯೂ ಒಮ್ಮತಕ್ಕೆ ಬಂದಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ವ್ಯಾಪಾರ ವಹಿವಾಟಿನಲ್ಲಿ ಹೂಡಿಕೆಗೆ ಭಾರತವು ಮುಕ್ತವಾಗಿದೆ ಎಂದ ಮೋದಿ, ರೈತರು, ಬಡವರ ಹಿತದೃಷ್ಟಿಯಿಂದ ಡಬ್ಲ್ಯುಟಿಒ ಒಪ್ಪಂದದ ಬಗ್ಗೆ ಭಾರತದ ಮೊದಲ ಕೆಲ ಆಕ್ಷೇಪಗಳಿವೆ. ಈ ಬಗ್ಗೆ ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿದರು.ಇದೇ ವೇಳೆ ಭಾರತಕ್ಕೆ ಭೇಟಿ ನೀಡುವಂತೆ ಒಬಾಮ ಕುಟುಂಬಕ್ಕೆ ಆಹ್ವಾನ ನೀಡಿರುವುದಾಗಿ ತಿಳಿಸಿದ್ದಾರೆ.

ಇದಕ್ಕೂ ಮೊದಲು ಮಾತನಾಡಿದ ಬರಾಕ್ ಒಬಾಮ, ಅಮೆರಿಕಾ-ಭಾರತದ ಬಾಂಧ್ಯವ್ಯವನ್ನು ಮತ್ತಷ್ಟು ವೃದ್ಧಿಗೊಳಿಸಲು ಮತ್ತು, ಹೆಚ್ಚಿನ ಅಭಿವೃದ್ಧಿ ಸಾಧಿಸಲು ಎದುರು ನೋಡುತ್ತಿರುವುದಾಗಿ ತಿಳಿಸಿದರು. ಅಣುಸಹಕಾರ ಒಪ್ಪಂದವನ್ನು ಮತ್ತಷ್ಟು ವಿಸ್ತರಿಸುವ, ಉಗ್ರವಾದ ಹತ್ತಿಕ್ಕುವ ಯುದ್ಧಪೀಡಿತ ಅಫ್ಘಾನಿಸ್ತಾನಕ್ಕೆ ನೆರವು ನೀಡುವ, ಎಬೊಲಾದಂತಹ ರೋಗ ಹತ್ತಿಕ್ಕುವ, ಮಂಗಳಯಾನ ಯೋಜನೆಯಲ್ಲಿ ಪರಸ್ಪರ ಸಹಕಾರ ನೀಡುವ ಕ್ರಮಗಳಿಗೆ ಉಭಯ ದೇಶಗಳು ಬದ್ಧವಾಗಿವೆ ಎಂದು ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited