ಜಮ್ಮು-ಕಾಶ್ಮೀರ : 'ಪಾಕಿಸ್ತಾನ'ದಲ್ಲಿ ಉಂಟಾಗಿರುವ ಪ್ರವಾಹದ ಬಗ್ಗೆ ಪ್ರತಿಕ್ರಿಯಿಸಿರುವ ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್, ಪಾಕಿಸ್ತಾನ ಎದುರಿಸುತ್ತಿರುವ ಪ್ರವಾಹಕ್ಕೆ ಭಾರತ ಕಾರಣ ಎಂದು ಹೇಳಿದ್ದಾನೆ.
ಭಾರತ ಸರ್ಕಾರ ಯಾವುದೇ ಸೂಚನೆ ನೀಡದೇ ನದಿಗಳ ನೀರನ್ನು ಬಿಡುಗಡೆ ಮಾಡಿರುವುದರ ಪರಿಣಾಮ, ಪಾಕಿಸ್ತಾನದಲ್ಲಿ ಪ್ರವಾಹ ಉಂಟಾಗಿದೆ ಎಂದು ಆರೋಪಿಸಿದ್ದಾನೆ. ಇದೇ ವೇಳೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರವಾಹಕ್ಕೆ ಸಿಲುಕಿಕೊಂಡಿರುವವರಿಗೆ ಪ್ರಧಾನಿ ನರೇಂದ್ರ ಮೋದಿ ಸಹಾಯ ಮಾಡುತ್ತಿರುವುದರ ಬಗ್ಗೆಯೂ ಹಫೀಜ್ ಸಯೀದ್ ಆಕ್ಷೇಪ ವ್ಯಕ್ತಪಡಿಸಿದ್ದು, ಅಲ್ಲಿನ ಜನತೆಗೆ ಸಹಾಯ ಮಾಡುತ್ತಿರುವು ಮೋದಿ ಸರ್ಕಾರದ ಕಿಡಿಗೇಡಿತನ ಎಂದು ಹಲುಬಿದ್ದಾನೆ.
ಪಾಕ್ ಆಕ್ರಮಿತ ಪ್ರದೇಶದಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡಿರುವವರನ್ನು ರಕ್ಷಿಸಲು ನಿಷೇಧಿತ ಜಮಾತ್ ಉದ್ ದವಾ ಉಗ್ರ ಸಂಘಟನೆ ಮೋಟಾರ್ ಬೋಟ್ ಸೇವೆಯನ್ನೂ ಆರಂಭಿಸಿದೆ. ಮಾನವೀಯ ದೃಷ್ಠಿಯಿಂದ ಈ ಕೆಲಸ ಮಾಡುತ್ತಿರುವುದಾಗಿ ಸಂಘಟನೆ ತಿಳಿಸಿದೆ.