Untitled Document
Sign Up | Login    
Dynamic website and Portals
  
September 9, 2014

ಆಪ್ ಶಾಸಕನಿಗೆ ಹಣದ ಆಮಿಷಃ ಬಿಜೆಪಿ ಮುಖಂಡನಿಗೆ ನೊಟೀಸ್ ಜಾರಿ

ನವದೆಹಲಿ : 'ಆಮ್ ಆದ್ಮಿ ಪಕ್ಷ' ಬಿಜೆಪಿ ವಿರುದ್ಧ ಬಿಡುಗಡೆ ಮಾಡಿರುವ ಸಿ.ಡಿಯಲ್ಲಿ ಬಿಜೆಪಿ ಮುಖಂಡ ಶೇರ್‌ ಸಿಂಗ್ ದಾಗರ್ ಕಾಣಿಸಿಕೊಂಡಿರುವುದರಿಂದ ಅವರಿಗೆ ಪಕ್ಷ ಶೋಕಾಸ್ ನೊಟೀಸ್ ಜಾರಿ ಮಾಡಿದೆ.

ದೆಹಲಿಯಲ್ಲಿ ಸರ್ಕಾರ ರಚನೆಗಾಗಿ ಬಿಜೆಪಿ ಹಿರಿಯ ಮುಖಂಡರು ಆಪ್ ಶಾಸಕರಿಗೆ ಹಣದ ಆಮಿಷವೊಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದ ಆಮ್ ಆದ್ಮಿ ಪಕ್ಷ, ಇದಕ್ಕೆ ಪೂರಕವಾಗಿ ಸಿ.ಡಿಯೊಂದನ್ನು ಬಿಡುಗಡೆ ಮಾಡಿತ್ತು. ಸಿ.ಡಿಯಲ್ಲಿ ಬಿಜೆಪಿ ಮುಖಂಡ ಶೇರ್ ಸಿಂಗ್ ದಾಗರ್ ಅವರು ಆಪ್ ಶಾಸಕನಿಗೆ ಹಣದ ಆಮಿಷವೊಡ್ಡುತ್ತಿರುವ ದೃಶ್ಯಾವಳಿಗಳಿವೆ. ಈ ಹಿನ್ನೆಲೆಯಲ್ಲಿ ತೀವ್ರ ಮುಜುಗರಕ್ಕೆ ಒಳಗಾಗಿರುವ ಬಿಜೆಪಿ, ಎಎಪಿ ಶಾಸಕ ದಿನೇಶ್ ಮೊಹಾನಿಯಾಗೆ 4 ಕೋಟಿ ಆಮಿಷ ನೀಡಿದ ಆರೋಪಕ್ಕೆ ಉತ್ತರಿಸಲು ಮೂರು ದಿನಗಳ ಗಡುವು ನೀಡಿದೆ.

'ಪಕ್ಷ ತೊರೆಯುವಂತೆ ಕೋರಿ ಸಂಗಂ ವಿಹಾರದ ಎಎಪಿ ಶಾಸಕ ದಿನೇಶ್ ಮೊಹಾನಿಯಾ ಅವರಿಗೆ ದಿಲ್ಲಿ ಬಿಜೆಪಿ ಉಪಾಧ್ಯಕ್ಷ ಶೇರ್ ಸಿಂಗ್ ದಾಗರ್ 4 ಕೋಟಿ ರೂ. ಆಮಿಷ ಒಡ್ಡಿದ್ದರು' ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. ಒಟ್ಟಾರೆ ದೆಹಲಿಯಲ್ಲಿ ಸರ್ಕಾರ ರಚನೆಗೆ ಬಿಜೆಪಿ ಕಸರತ್ತು ನಡೆಸುತ್ತಿರುವಾಗಲೇ ಆಪ್ ಬಿಡುಗಡೆ ಮಾಡಿರುವ ವಿಡಿಯೋದಿಂದ ಪಕ್ಷಕ್ಕೆ ತೀವ್ರ ಮುಜುಗರವಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited