ಬೆಂಗಳೂರು : 'ವಂಚನೆ ಪ್ರಕರಣ'ಕ್ಕೆ ಸಂಬಂಧಿಸಿದಂತೆ ಆರೋಪಿ ಕಾರ್ತಿಕ್ ಗೌಡ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೆ.5ರಂದು ಅಂತ್ಯಗೊಂಡಿದ್ದು ತೀರ್ಪನ್ನು ಸೆ.6ರಕ್ಕೆ ಕಾಯ್ದಿರಿಸಲಾಗಿದೆ.
ನಟಿ ಮೈತ್ರಿಯಾ ಗೌಡ, ಕೇಂದ್ರ ಸಚಿವ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಬಿ.ವಿ ಆಚಾರ್ಯ ಮೂಲಕ ಕಾರ್ತಿಕ್ ಗೌಡ ಬೆಂಗಳೂರು ಸೆಷನ್ಸ್ ಕೋರ್ಟ್ ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಸೆ.4 ರಂದು ಅರ್ಜಿ ವಿಚಾರಣೆ ಪೂರ್ಣಗೊಂಡಿದೆ. ನಾಳೆಗೆ ತೀರ್ಪು ಕಾಯ್ದಿರಿಸಲಾಗಿದ್ದು ಪ್ರಕರಣ ಕುತೂಹಲ ಮೂಡಿಸಿದೆ.
ಇದೇ ವೇಳೆ, ಕಾರ್ತಿಕ್ ಗೌಡ ಅವರ ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಕಾರ್ತಿಕ್ ಗೌಡ ಅವರನ್ನು ಬಂಧಿಸಲು ಎಸಿಪಿ ಓಂಕಾರಯ್ಯ ನೇತೃತ್ವದಲ್ಲಿ 3 ತಂಡಗಳನ್ನು ರಚಿಸಲಾಗಿದೆ. ಸೆ.6ರಂದು ನಿರೀಕ್ಷಣಾ ಜಾಮೀನು ದೊರೆತರೆ ಕಾರ್ತಿಕ್ ಗೌಡ ಬಂಧನದಿಂದ ಪಾರಾಗುವ ಸಾಧ್ಯತೆ ಇದೆ.