ನವದೆಹಲಿ : ಅಲ್ ಖೈದಾ ಉಗ್ರ ಸಂಘಟನೆ ಭಾರತದ ಮೇಲೆ ಮತ್ತೊಮ್ಮೆ ಕಣ್ಣಿಟ್ಟಿದೆ. ಭಾರತದಲ್ಲಿ ಅಲ್ ಖೈದಾ ಉಗ್ರ ಸಂಘಟನೆಯ ಶಾಖೆ ತೆರೆಯಲು ಅಲ್ ಖೈದಾ ಮುಖ್ಯಸ್ಥ ಐಮನ್ ಅಲ್ ಜವಾಹರಿ ಕರೆ ನೀಡಿದ್ದಾನೆ.
ಭಾರತದ ಮೇಲೆ ದಾಳಿ ನಡೆಸಿ, ಅಲ್ಲಿ ಗುಂಪುಕಟ್ಟಿ ಅಲ್ ಖೈದಾ ಶಾಖೆ ತೆರೆಯುವ ಕುರಿತು ಬೆದರಿಕೆ ಹಾಕಿರುವ ವಿಡೊಯೋವನ್ನು ಇಂಟರ್ ನೆಟ್ ನಲ್ಲಿ ಅಲ್ ಖೈದಾ ಬಿಡುಗಡೆ ಮಾಡಿದೆ.
55 ನಿಮಿಷಗಳವರೆಗಿನ ಈ ವಿಡಿಯೋದಲ್ಲಿ ಬರ್ಮಾ, ಬಾಂಗ್ಲಾದೇಶ್, ಕಾಶ್ಮೀರ, ಅಸ್ಸಾಂ, ಗುಜರಾತ್, ಅಹಮದಾಬಾದ್ ನ ಮುಸ್ಲೀಂರಿಗೆ ಸಂತಸದ ಸಮಾಚಾರ. ಭಾರತ, ಉಪಖಂಡಗಳಲ್ಲಿ ಅಲ್ ಖೈದಾ ಸಂಘಟನೆ ಧ್ವಜಹಾರಿಸಲಾಗುವುದು. ಜಗತ್ತಿನ ಮುಸ್ಲೀಂ ಹೋರಾಟಗಾರರು ಒಂದಾಗಬೇಕು ಎಂದಿದ್ದಾನೆ. ಅಲ್ಲದೇ ಇಸ್ಲಾಮಿಕ್ ಆಡಳಿತ, ಜಿಹಾದಿಗೆ ಜವಾಹರಿ ಕರೆ ನೀಡಿದ್ದಾನೆ.
ಭಾರತದ ಮೇಲೆ ಅಲ್ ಖೈದಾ ದಾಳಿ ನಡೆಸುವ ಬೆದರಿಕೆಯುಳ್ಳ ವಿಡಿಯೋ ಬಿಡುಗಡೆ ಹಿನ್ನಲೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆ ದೇಶಾದ್ಯಂತ ಹೈ ಅಲರ್ಟ್ ಘೋಷಿಸಿದೆ.
ಪ್ರಮುಖವಾಗಿ ನಾಲ್ಕುರಾಜ್ಯಗಳಾದ ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರ ಹಾಗೂ ಗುಜರಾತ್ ಗಡಿ ಭಾಗಗಳಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಿದೆ.