ಕಾಶ್ಮೀರ : ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಬುರ್ಹಾನ್ ವಾನಿಯನ್ನು ಭದ್ರತಾ ಪಡೆಗಳು ಗುಂಡಿಟ್ಟು ಕೊಂದ ಹಿನ್ನಲೆಯಲ್ಲಿ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ವಾನಿ ಪರವಾಗಿ ಬೀದಿಗಿಳಿ ದಿರುವ ಅಪಾರ ಸಂಖ್ಯೆಯ ಜನರು ಕಾಶ್ಮೀರದಾದ್ಯಂತ ಹಿಂಸಾ ಚಾರ ನಡೆಸಿದ್ದಾರೆ. ಮೂರು ಪೊಲೀಸ್ ಕಟ್ಟಡ ಸೇರಿ ಹಲವಾರು ಬಿಲ್ಡಿಂಗ್ಗಳಿಗೆ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಾಕಾರರ ಸಿಟ್ಟಿಗೆ ಹಲವು ವಾಹನಗಳೂ ಭಸ್ಮವಾಗಿವೆ. ಈ ನಡುವೆ ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ 12 ಮಂದಿ ಹತ್ಯೆಯಾಗಿದ್ದು, ಭದ್ರತಾ ಪಡೆಯ 86 ಸಿಬ್ಬಂದಿಯೂ ಸೇರಿದಂತೆ 126 ಜನರಿಗೆ ಗಾಯಗಳಾಗಿವೆ.
ಕುಲ್ಗಾಂವ್ನ ಬಿಜೆಪಿ ಕಚೇರಿ ಯನ್ನು ಪ್ರತಿಭಟನಾಕಾರರು ಧ್ವಂಸ ಗೊಳಿಸಿದ್ದಾರೆ. ಅಲ್ಲದೆ ಹಲವು ಪ್ರದೇಶಗಳಲ್ಲಿ ಪೊಲೀಸರ ಮೇಲೆ ಕಲ್ಲು ಎಸೆಯಲಾಗಿದೆ. ಹಿಂಸಾಚಾರ ಹೆಚ್ಚುತ್ತಿದ್ದಂತೆ ಕಾಶ್ಮೀರದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಯನ್ನು ಸ್ಥಗಿತಗೊಳಿಸಲಾಗಿದೆ. ಪುಲ್ವಾಮಾ, ಅನಂತನಾಗ್, ಶೋಪಿಯಾನ್, ಪುಲ್ಗಾಂವ್ ಮತ್ತು ಸೋಪೋರೆಯಲ್ಲಿ ಕರ್ಫ್ಯೂ ವಿಧಿಸಲಾಗಿದೆ. ರೈಲ್ವೆ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ಪ್ರತ್ಯೇಕತಾ ವಾದಿ ಹುರಿಯತ್ ಮುಖಂಡ ಮೀರ್ವಾಯಿಜ್ ಉಮರ್ ಫಾರೂಕ್ ಸೋಮವಾರವೂ ಬಂದ್ ಆಚರಿಸುವಂತೆ ಕರೆ ನೀಡಿದ್ದಾರೆ.