ನವದೆಹಲಿ : ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸಿ ಪ್ರಚಾರ ಗಿಟ್ಟಿಸಿಕೊೞೂವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಮತ್ತೊಮ್ಮೆ ವಿವಾದ ಸೃಷ್ಠಿಸಿದ್ದಾರೆ. ಟ್ವಿಟರ್ ನಲ್ಲಿ ಐ.ಎಸ್.ಐ.ಎಸ್ ಉಗ್ರರನ್ನು ಹಿಂದೂ ದೇವತೆಗಳಿಗೆ ಹೋಲಿಸುವ ಮೂಲಕ ಸೆಟಲ್ವಾಡ್ ತೀವ್ರ ವಿವಾದಕ್ಕೆ ಕಾರಣವಾಗಿದ್ದಾರೆ.
ಅಮೆರಿಕಾ ಪತ್ರಕರ್ತನೋರ್ವನ ಶಿರಚ್ಛೇಧನ ಮಾಡುವುದಕ್ಕೂ ಮುನ್ನ ಐ.ಎಸ್.ಐ.ಎಸ್ ಉಗ್ರರು ತೆಗೆದಿದುವ ಛಾಯಾಚಿತ್ರವನ್ನು ಫೊಟೋಶಾಪ್ ಮೂಲಕ ಬದಲಾವಣೆ ಮಾಡಿ ಉಗ್ರರನ್ನು ಹಿಂದೂ ದೇವತೆಗಳಂತೆ ಚಿತ್ರಿಸಲಾಗಿದೆ. ಚಿಲ್ಲಿಂಗ್ ರಿಯಾಲಿಟಿ ಎಂದು ಉಗ್ರರ ಫೊಟೋಗಳನ್ನು ಹಿಂದೂ ದೇವತೆಗಳಾದ ಕಾಳಿ, ಕೃಷ್ಣನಿಗೆ ಹೋಲಿಸಲಾಗಿದೆ.
ತೀಸ್ತಾ ಸೆಟಲ್ವಾಡ್ ಅವರ ಟ್ವಿಟ್ ಗೆ ಸಾಮಾಜಿಕ ಜಾಲತಾಣಗಳಿಂದ ಛೀಮಾರಿಯ ಮಹಾಪೂರವೇ ಹರಿದುಬರುತ್ತಿದೆ. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ತೀಸ್ತಾ ಸೆಟಲ್ವಾಡ್ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಅಂತರ್ಜಾಲ ಅಭಿಯಾನ ಕೈಗೊಳ್ಳಲಾಗಿದೆ. ಹಾಗೂ ಆಕೆಗೆ ಹಿಂದಿನ ಯುಪಿಯೆ ಸರಕಾರ ದಯಪಾಲಿಸಿದ ಪದ್ಮ ಪ್ರಶಸ್ತಿಯನ್ನು ಹಿಂಪಡೆಯಬೇಕೆಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ.
ಸೈಬರ್ ಕ್ರೈಮ್ ಕಾಯ್ದೆ ಪ್ರಕಾರ ತೀಸ್ತಾ ಸೆಟಲ್ವಾಡ್ ಅಪರಾಧ ನಡೆಸಿರುವುದು ಸಾಬೀತಾಗಿದೆ.
ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ತೀಸ್ತಾ ಸೆಟಲ್ವಾಡ್ ಅವರ ಜನ್ಮ ಜಾಲಾಡುತ್ತಿರುವ ಹಿನ್ನೆಲೆಯಲ್ಲಿ ಹಿಂದೂ ದೇವತೆಗಳಿಗೆ ಐ.ಎಸ್.ಐ.ಎಸ್ ಉಗ್ರರನ್ನು ಹೋಲಿಸಿರುವ ಭಾವಚಿತ್ರವನ್ನು ತೆಗೆದುಹಾಕಲಾಗಿದೆ.