ನವದೆಹಲಿ : 'ಸ್ವಾತಂತ್ರ್ಯ ದಿನಾಚರಣೆ' ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದ ಬಗ್ಗೆ ಕಾಂಗ್ರೆಸ್&id=15283'>ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದು, ಈ ಹಿಂದಿನ ಯುಪಿಎ ಸರ್ಕಾರದ ಘೋಷಣೆಗಳನ್ನೇ ನರೇಂದ್ರ ಮೋದಿ ಹೊಸರೂಪದಲ್ಲಿ ಪ್ರಸ್ತುತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಕಳೆದ 3 ತಿಂಗಳಿನಿಂದ ನರೇಂದ್ರ ಮೋದಿ ಮಾಡುತ್ತಿರುವುದು ಹಾಗೂ ಕೆಂಪುಕೋಟೆಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿರುವುದು ಯುಪಿಎ ಸರ್ಕಾರದ ನಕಲು, ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮೋದಿ ಹೇಳಿರುವುದನ್ನು ಯುಪಿಎ ಸರ್ಕಾರ ಈಗಾಗಲೇ ಮಾಡಿದೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.
ಮೋದಿ ತಮ್ಮ ಭಾಷಣದಲ್ಲಿ ಶೌಚಾಲಯ, ಸ್ವಚ್ಛತೆ ಬಗ್ಗೆ ಮಾತನಾಡಿದ್ದಾರೆ. ನೈರ್ಮಲೀಕರಣ ಪ್ರಚಾರ ಆರಂಭಿಸಿದ್ದೇ ಯುಪಿಎ ಸರ್ಕಾರ, ಇನ್ನು ಕೌಶಲ್ಯ ಅಭಿವೃದ್ಧಿಯ ಆರಂಭಿಸಿದ್ದೂ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವಾಗಿದ್ದು, ಮೋದಿ ಯುಪಿಎ ಸರ್ಕಾರ ಮಾಡಿರುವುದನ್ನೇ ಹೊಸ ರೀತಿಯಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಬೇಕು, ವಿದೇಶದಿಂದ ಆಮದಾಗುವ ವಸ್ತುಗಳನ್ನು ನಮ್ಮ ದೇಶದಲ್ಲಿಯೇ ಉತ್ಪಾದಿಸುವ ಮೂಲಕ ಪ್ರತಿ ಉತ್ಪನ್ನಗಳ ಮೇಡ್ ಇನ್ ಇಂಡಿಯಾ ಎಂಬ ಬರಹ ಕಾಣುವಂತೆ ಮಾಡಬೇಕೆಂದು ಅಭಿವೃದ್ಧಿಯ ಬಗ್ಗೆ ತಮ್ಮ ಚಿಂತನೆಗಳನ್ನು ದೇಶದಜನತೆ ಮುಂದಿಟ್ಟಿದ್ದರು. ಮೋದಿ ಐತಿಹಾಸಿಕ ಭಾಷಣಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ ಎಂದಿನಂತೆ ಕಾಂಗ್ರೆಸ್&id=15283'>ಕಾಂಗ್ರೆಸ್ ಮಾತ್ರ ಟೀಕೆಯಲ್ಲೇ ನಿರತವಾಗಿದೆ.