ಬೆಂಗಳೂರು : 1998, 1999, 2004ರ ಕೆಪಿಎಸ್ ಸಿ ನೇಮಕಾತಿ ಹಗರಣದ ವಿಚಾರಣೆಯಿಂದ ಹೈಕೋರ್ಟ್ ಮುಖ್ಯ ನ್ಯಾ.ವಘೇಲಾ ಹಿಂದೆ ಸರಿದಿದ್ದಾರೆ.
1998, 1999, 2004ರ ಕೆಪಿಎಸ್ ಸಿ ನೇಮಕಾತಿ ಹಗರಣದ ಬಗ್ಗೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಯುತ್ತಿತ್ತು. ಆದರೆ ಹೈಕೋರ್ಟ್ ಮುಖ್ಯ ನ್ಯಾ.ವಘೇಲಾ ಅವರು ಪ್ರಕರಣದ ವಿಚಾರಣೆಯಿಂದ ವಿಮುಖರಾಗಿದ್ದಾರೆ.
ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಿಗೆ ಅನಾಮಧೇಯ ಆಕ್ಷೇಪಾರ್ಹ ಪತ್ರಗಳು ಬರುತ್ತಿದ್ದ ಹಿನ್ನಲೆಯಲ್ಲಿ ವಿಚಾರಣೆಯನ್ನು ನ್ಯಾ.ವಘೇಲಾ ಬೇರೊಂದು ಪೀಠಕ್ಕೆ ವರ್ಗಾವಣೆ ಮಾಡಿದ್ದಾರೆ.
ಈ ಹಿನ್ನಲೆಯಲ್ಲಿ ಹಗರಣದ ಪಿಐಎಲ್ ವಿಚಾರಣೆ ಇನ್ನು ಮುಂದೆ ಹೈಕೋರ್ಟ್ ವಿಭಾಗೀಯ ಪೀಠದ ಬದಲಾಗಿ ಬೇರೊಂದು ಪೀಠದಲ್ಲಿ ನಡೆಯಲಿದೆ.