ಬೆಂಗಳೂರು : ರಾಜ್ಯ ಸಾರಿಗೆ ನೌಕರರ ಮುಷ್ಕರದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಸ್ಮಾ ಜಾರಿಯೂ ಇಲ್ಲ, ಮುಷ್ಕರ ನಿರತರು ಕೇಳಿದಷ್ಟು ಸಂಬಳ ನೀಡಲು ಸಾಧ್ಯವೂ ಇಲ್ಲ ಎಂದು ತಿಳಿಸಿದ್ದಾರೆ.
ಗೃಹ ಕಛೇರಿ ಕೃಷ್ಣಾದಲ್ಲಿ ಮಾನತಾಡಿದ ಅವರು, ಕಳೆದ ಬಾರಿಯೂ ಶೇ.10ರಷ್ಟು ಸಂಬಳ ಹೆಚ್ಚಳ ಮಾಡಿದ್ದೇವೆ. ನೌಕರರು ಮುಷ್ಕರವನ್ನು ಕೈಬಿಟ್ಟು ಮಾತುಕತೆಗೆ ಮುಂದಾಗಬೇಕು. ಅವರು ಕೇಳಿದಷ್ಟು, ಅಂದರೆ ಶೇ.30ರಷ್ಟು ವೇತನ ಹೆಚ್ಚಿಸಲು ಸಾಧ್ಯವಿಲ್ಲ ಎಂದರು.
ನೌಕರರ ಸಂಬಳದ ಬಗ್ಗೆ ಸಚಿವ ಸಂಪುಟ ಸಭೆ.ಶೇ.8ರಷ್ಟು ಒಪ್ಪಿಗೆ ನೀಡಿದೆ. ಆದರೆ ಶೇ.30, 35ರಷ್ಟು ಹೆಚ್ಚಳ ಮಾಡಲು ಅಸಾಧ್ಯ. ಹಾಗಾಗಿ ವೇತನ ಹೆಚ್ಚಳ ಬಗ್ಗೆ ಮತ್ತೆ ಪ್ರಸ್ತಾಪ ಇಲ್ಲ. ಸಾರಿಗೆ ನೌಕರರ ಜೊತೆ ಮಾತುಕತೆಗೆ ಸಿದ್ದರಿದ್ದೇವೆ. ಎಸ್ಮಾ ಜಾರಿ ಮಾಡೋದಿಲ್ಲ ಎಂದು ಸಿಎಂ ಸ್ಪಷ್ಟ ಪಡಿಸಿದರು.
ಸಾರಿಗೆ ನಿಗಮಗಳು ನಷ್ಟದಲ್ಲಿವೆ. ನಮಗೆ ಈಗಾಗಲೇ ಹೆಚ್ಚುವರಿ ಹೊರೆ ಬೀಳುತ್ತಿದೆ. ಇದನ್ನು ಅರ್ಥಮಾಡಿಕೊಂಡು ಎಲ್ಲಾ ನೌಕರರು ಕೆಲಸಕ್ಕೆ ಹಾಜರಾಗುವಂತೆ ಮನವಿ ಮಾಡಿದರು.