Untitled Document
Sign Up | Login    
Dynamic website and Portals
  
July 1, 2016

ತೇಜಸ್ ಯುದ್ಧ ವಿಮಾನ ಇಂದು ಭಾರತೀಯ ಸೇನೆಗೆ ಸೇರ್ಪಡೆ

ತೇಜಸ್ ಯುದ್ಧ ವಿಮಾನ ಇಂದು ಭಾರತೀಯ ಸೇನೆಗೆ ಸೇರ್ಪಡೆ

ಬೆಂಗಳೂರು : ಸ್ವದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್ ಇಂದು ಭಾರತೀಯ ಸೇನೆಗೆ ಸೇರ್ಪಡೆಯಾಗಲಿದೆ. ಈ ಮೂಲಕ ಭಾರತೀಯ ವಾಯು ಸೇನೆಯ ದಶಕಗಳ ಕನಸು ನನಸಾಗುತ್ತಿದೆ.

ಬೆಂಗಳೂರಿನ ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ ತೇಜಸ್ ಸೇರ್ಪಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿಂದೆಯೇ ತೇಜಸ್ ಯುದ್ಧ ವಿಮಾನ ವಾಯು ಸೇನೆಗೆ ಸೇರ್ಪಡೆಗೊಳ್ಳಬೇಕಿತ್ತಾದರೂ, ತಾಂತ್ರಿಕ ದೋಷ ಮತ್ತು ಕಾರಣಾಂತರಗಳಿಂದ ತೇಜಸ್ ವಾಯು ಸೇನೆ ಸೇರ್ಪಡೆ ಮುಂದಕ್ಕೆ ಸಾಗುತ್ತಾ ಬಂದಿತ್ತು. ಇದೀಗ ಅಂತಿಮವಾಗಿ ತನ್ನ ಎಲ್ಲ ತೊಡಕಗಳನ್ನು ನಿವಾರಿಸಿಕೊಂಡಿರುವ ತೇಜಸ್ ಅಧಿಕೃತವಾಗಿ ಇಂದು ವಾಯು ಸೇನೆಗೆ ಸೇರ್ಪಡೆಯಾಗಲಿದೆ.

ಸೇನೆಯಲ್ಲಿ ಬಳಕೆಯಲ್ಲಿರುವ ಮಿಗ್‍-25ರ ಬದಲಾಗಿ ತೇಜಸ್ ಸೇಪ೯ಡೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದೆ. ಪ್ರಸಕ್ತ ಆಥಿ೯ಕ ವಷ೯ದಲ್ಲಿ ಎಚ್‍ಎಎಲ್ ಸಂಸ್ಥೆ ಒಟ್ಟು 4 ತೇಜಸ್ ವಿಮಾನಗಳನ್ನು ಹಸ್ತಾ೦ತರಿಸಲಿದ್ದು, ಮು೦ದಿನ ಸಾಲಿನಲ್ಲಿ 8 ವಿಮಾನಗಳ ಪೂರೈಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

1990ರ ಏರೋನಾಟಿಕಲ್ ಡೆವಲಪ್‍ಮೆ೦ಟ್ ಏಜೆನ್ಸಿಯು ತೇಜಸ್‍ನ ವಿನ್ಯಾಸ ತಯಾರಿಸಿ ಎಚ್‍ಎಎಲ್ ಗೆ ಹಸ್ತಾ೦ತರಿಸಿತ್ತು. ಇದಕ್ಕೆ ಡಿಆರ್‍ ಡಿಒ ಸ೦ಸ್ಥೆಯ ವಿಜ್ಞಾನಿಗಳು ದೇಶಿ ನಿಮಿ೯ತ ಇ೦ಜಿನ್ ನಿಮಿ೯ಸಿಕೊಡುವ ಭರವಸೆ ನೀಡಿದ್ದರು. ಆದರೆ ಇ೦ಜಿನ್‍ನಲ್ಲಿ ದೋಷ ಕ೦ಡುಬ೦ದ ಹಿನ್ನಲೆಯಲ್ಲಿ ಅದನ್ನು ಸರಿಪಡಿಸಲು ವಿಳ೦ಬವಾದ್ದರಿ೦ದ ವಿಮಾನ ತಯಾರಿಕಾ ಯೋಜನೆಯೂ ತಡವಾಯಿತು. ಅಂತಿಮವಾಗಿ ಎಲ್ಲ ತಾಂತ್ರಿಕ ದೋಷಗಳನ್ನು ಸರಿಪಡಿಸಕೊಂಡ ತೇಜಸ್ ಮಾದರಿ ವಿಮಾನ ಕೊನೆಗೂ ಸಿದ್ಧಗೊ೦ಡು ಈ ವಷ೯ ಹಾರಾಟಕ್ಕೆ ಅನುಮತಿ ಸಿಕ್ಕಿದೆ.

ರಕ್ಷಣಾ ಇಲಾಖೆಯ ಮೂಲಗಳ ಪ್ರಕಾರ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನ ಮೂರು ಮಾದರಿಗಳಲ್ಲಿ ಲಭ್ಯವಿದ್ದು, ಅದರಲ್ಲಿ ಒ೦ದು ತರಬೇತಿಗೆ ಬಳಸುವ ಯುದ್ಧ ವಿಮಾನವಾದರೆ, ಮತ್ತೊಂದು ವಾಯುಪಡೆಗೆ ಹಾಗೂ ಇನ್ನೊ೦ದು ನೌಕಾಪಡೆಗೆ ಬಳಸುವ ವಿಮಾನವಾಗಿದೆ. ತರಬೇತಿ ವಿಮಾನದಲ್ಲಿ ಎರಡು ಆಸನದ ವ್ಯವಸ್ಥೆಯಿದ್ದರೆ, ಉಳಿದ ಎರಡು ಮಾದರಿಗಳಲ್ಲಿ ಒ೦ದೇ ಆಸನವಿರುತ್ತದೆ. ಇವು ರಾಕೆಟ್, ಕ್ಷಿಪಣಿ, ಬಾ೦ಬ್ ಮತ್ತಿತರ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊ೦ದಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited