Untitled Document
Sign Up | Login    
Dynamic website and Portals
  
February 19, 2016

ರೈಲಿನಡಿ ಸಿಲುಕಿ ನಾಲ್ಕು ಗ್ಯಾಂಗ್‌ಮನ್‌ಗಳ ಸಾವು

ಮುಂಬೈ : ಮುಂಬಯಿನ ಕುರ್ಲಾ ಮತ್ತು ವಿದ್ಯಾವಿಹಾರ್‌ ಸ್ಟೇಶನ್‌ಗಳ ನಡುವೆ ನಾಲ್ವರು ಗ್ಯಾಂಗ್‌ ಮನ್‌ ಗಳು ಲೋಕಲ್‌ ರೈಲಿಗೆ ಸಿಲುಕಿ ದಾರುಣವಾಗಿ ಮೃತ ಪಟ್ಟಿರುವ ಘಟನೆ ಎಂದು ತಿಳಿದುಬಂದಿದೆ.

ಶುಕ್ರವಾರ ಬೆಳಗ್ಗೆ 6.15 ಮತ್ತು 6.30ರ ನಡುವೆ ಈ ದುರ್ಘಟನೆ ನಡೆದಿದೆ. ಛತ್ರಪತಿ ಶಿವಾಜಿ ಟರ್ಮಿನಸ್‌ ಕಡೆಗೆ ಹೋಗುತ್ತಿದ್ದ ಲೋಕಲ್‌ ರೈಲು ಈ ನಾಲ್ವರು ಗ್ಯಾಂಗ್‌ಮನ್‌ಗಳ ಮೇಲೆ ಹರಿದಿದೆ ಎಂದು ಸರಕಾರಿ ರೈಲ್ವೆ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ ನಾಲ್ವರು ಗ್ಯಾಂಗ್‌ಮನ್‌ಗಳು ಕುರ್ಲಾ - ವಿದ್ಯಾವಿಹಾರ ರೈಲು ನಿಲ್ದಾಣಗಳ ನಡುವೆ ರೈಲಿನ ಹಳಿಯ ಮೇಲೆ ನೆದೆದು ಹೋಗುತ್ತಿದ್ದರು. ಇವರಿಗೆ ಕತ್ತಲಲ್ಲಿ ತಾವು ನಡೆಯುತ್ತಿದ್ದ ಹಳಿಯ ಮೇಲೆಯೇ ಕರ್ಜಾತ್‌ - ಸಿಎಸ್‌ಟಿ ಲೋಕಲ್‌ ರೈಲು ಬರುತ್ತಿರುವುದು ಕಾಣಿಸಲಲ್ಲ .

ರೈಲು ಹರಿದ ತೀವ್ರ ಗಾಯಗೊಂಡ ಈ ನಾಲ್ವರು ಗ್ಯಾಂಗ್‌ಮನ್‌ಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಆಸ್ಪತ್ರೆಗೆ ತಲುಪುವ ವೇಳೆಗೆ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆಂದು ಸೆಂಟ್ರಲ್‌ ರೈಲ್ವೆಯ ಡೆಪ್ಯುಟಿ ರೈಲ್ವೇ ಪೊಲೀಸ್‌ ಕಮಿಷನರ್‌ ರೂಪಾಲಿ ಅಂಬುರೆ ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited