ಮುಂಬೈ : ಮುಂಬಯಿನ ಕುರ್ಲಾ ಮತ್ತು ವಿದ್ಯಾವಿಹಾರ್ ಸ್ಟೇಶನ್ಗಳ ನಡುವೆ ನಾಲ್ವರು ಗ್ಯಾಂಗ್ ಮನ್ ಗಳು ಲೋಕಲ್ ರೈಲಿಗೆ ಸಿಲುಕಿ ದಾರುಣವಾಗಿ ಮೃತ ಪಟ್ಟಿರುವ ಘಟನೆ ಎಂದು ತಿಳಿದುಬಂದಿದೆ.
ಶುಕ್ರವಾರ ಬೆಳಗ್ಗೆ 6.15 ಮತ್ತು 6.30ರ ನಡುವೆ ಈ ದುರ್ಘಟನೆ ನಡೆದಿದೆ. ಛತ್ರಪತಿ ಶಿವಾಜಿ ಟರ್ಮಿನಸ್ ಕಡೆಗೆ ಹೋಗುತ್ತಿದ್ದ ಲೋಕಲ್ ರೈಲು ಈ ನಾಲ್ವರು ಗ್ಯಾಂಗ್ಮನ್ಗಳ ಮೇಲೆ ಹರಿದಿದೆ ಎಂದು ಸರಕಾರಿ ರೈಲ್ವೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ ನಾಲ್ವರು ಗ್ಯಾಂಗ್ಮನ್ಗಳು ಕುರ್ಲಾ - ವಿದ್ಯಾವಿಹಾರ ರೈಲು ನಿಲ್ದಾಣಗಳ ನಡುವೆ ರೈಲಿನ ಹಳಿಯ ಮೇಲೆ ನೆದೆದು ಹೋಗುತ್ತಿದ್ದರು. ಇವರಿಗೆ ಕತ್ತಲಲ್ಲಿ ತಾವು ನಡೆಯುತ್ತಿದ್ದ ಹಳಿಯ ಮೇಲೆಯೇ ಕರ್ಜಾತ್ - ಸಿಎಸ್ಟಿ ಲೋಕಲ್ ರೈಲು ಬರುತ್ತಿರುವುದು ಕಾಣಿಸಲಲ್ಲ .
ರೈಲು ಹರಿದ ತೀವ್ರ ಗಾಯಗೊಂಡ ಈ ನಾಲ್ವರು ಗ್ಯಾಂಗ್ಮನ್ಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಆಸ್ಪತ್ರೆಗೆ ತಲುಪುವ ವೇಳೆಗೆ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆಂದು ಸೆಂಟ್ರಲ್ ರೈಲ್ವೆಯ ಡೆಪ್ಯುಟಿ ರೈಲ್ವೇ ಪೊಲೀಸ್ ಕಮಿಷನರ್ ರೂಪಾಲಿ ಅಂಬುರೆ ತಿಳಿಸಿದ್ದಾರೆ.