ನವದೆಹಲಿ : ಉಗ್ರಗಾಮಿಗಳ ಒಳನುಸುಳುವಿಕೆಯನ್ನು ತಡೆಯಲು, ಭಾರತ - ಪಾಕಿಸ್ತಾನ ಗಡಿಪ್ರದೇಶದಲ್ಲಿನ 40 ಜಾಗಗಳನ್ನು ಗುರುತಿಸಿ ಅಲ್ಲಿ ಲೇಸರ್ ಗೋಡೆಗಳನ್ನು ನಿರ್ಮಿಸಲು ಗೃಹ ಸಚಿವಾಲಯ ನಿರ್ಧರಿಸಿದೆ. ಪಠಾಣ್ ಕೋಟ್ ದಾಳಿಯ ನಂತರ ಉಗ್ರರ ಒಳನುಸುಳುವಿಕೆ ತಡೆಯಲು ಗೃಹ ಸಚಿವಾಲಯ ಅತ್ಯಂತ ಪ್ರಾಮುಖ್ಯತೆ ಕೊಟ್ಟ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊೞಲಾಗಿದೆ ಎಂದು ತಿಳಿದು ಬಂದಿದೆ.
ಪಂಜಾಬ್ ನ ನದಿ ಪ್ರದೇಶದ ಗಡಿ ಭಾಗಗಳನ್ನು ಬಿ ಎಸ್ ಎಫ್ ಅಭಿವೃದ್ಧಿಪಡಿಸಿರುವ ಲೇಸರ್ ಗೋಡೆಗಳನ್ನು ನಿರ್ಮಿಸಿ ಉಗ್ರರ ಒಳನುಸುಳುವೆಕೆಯನ್ನು ತಡೆಗಟ್ಟಲಾಗುವುದು ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಲೇಸರ್ ಮೂಲ (Source) ಮತ್ತು ಶೋಧಕದ (Detector) ಮಧ್ಯೆ ಹಾದಿಹೋಗುವ ವಸ್ತುಗಳನ್ನು ಪತ್ತೆ ಮಾಡುವ ತಂತ್ರಜ್ನಾನವನ್ನು ಲೇಸರ್ ಗೋಡೆ ಎನ್ನುತ್ತಾರೆ. ಗಡಿಭಾಗದ ನದಿ ಪ್ರದೇಶಗಳಲ್ಲಿ ಈ ತಂತ್ರಜ್ನಾನವನ್ನು ಉಪಯೋಗಿಸಲಾಗುವುದು. ಲೇಸರ್ ಕಿರಣಗಳನ್ನು ನದಿಯ ಮೇಲೆ ಬಿಡಲಾಗುವುದು, ಯಾವುದೇ ವಸ್ತು ಮಧ್ಯದಲ್ಲಿ ಕಂಡುಬಂದಲ್ಲಿ ಸೈರನ್ ಆಗುತ್ತದೆ.
ಈಗ 5-6 ಕಡೆಗಳಲ್ಲಿ ಮಾತ್ರ ಲೇಸರ್ ಗೋಡೆ ಇದೆ. ಪಠಾಣ್ ಕೋಟ್ ದಾಳಿಯ ಸಂದರ್ಭದಲ್ಲಿ ಉಗ್ರರು ನುಸುಳಿದ ಕಡೆ 130 ಮೀಟರ್ ನದಿ ಹಾಸಿನ ಮೇಲೆ ನಿಗಾ ಇಡಲು ಕ್ಯಾಮರಾ ಅಳವಡಿಸಲಾಗಿತ್ತಾದರೂ ಆ ಸಂದರ್ಭದಲ್ಲಿ ರೆಕಾರ್ಡಿಂಗ್ ಆಗಿರುವುದು ಕಂಡುಬಂದಿಲ್ಲ. ಆದ್ದರಿಂದ ಈಗ ಸುಮಾರು 40 ಸೂಕ್ಷ್ಮ ಪ್ರದೇಶಗಳಲ್ಲಿ ಲೇಸರ್ ಗೋಡೆ ನಿರ್ಮಿಸಲಿ ನಿರ್ಧರಿಸಲಾಗಿದೆ.