ನವದೆಹಲಿ : ಶನಿವಾರ ಪಟಿಯಾಲಾ ನ್ಯಾಯಾಲಯಕ್ಕೆ ಹಾಜರಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ನ್ಯಾಯಾಲಯ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಂಚನೆ ಮತ್ತು ದುರುಪಯೋಗ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿದೆ. ಶ್ಯೂರಿಟಿ ಮತ್ತು ತಲಾ 50 ಸಾವಿರ ಬಾಂಡ್ ಆಧಾರದ ಮೇಲೆ ಯಾವುದೇ ಷರತ್ತಿಲ್ಲದೇ ಜಾಮೀನು ಮಂಜೂರು ಮಾಡಿದೆ.
ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಇತರ ನಾಲ್ವರು ಕಾಂಗ್ರೆಸ್ಸಿಗರಿಗೂ ಜಾಮೀನು ಮಂಜೂರು ಮಾಡಿ, ಪ್ರಕರಣದ ವಿಚಾರಣೆಯನ್ನು ಫೆ. 20ಕ್ಕೆ ಮುಂದೂಡಲಾಗಿದೆ.
ಸೋನಿಯಾ ಗಾಂಧಿಗೆ ಎಕೆ ಆಂಟನಿ ಶ್ಯೂರಿಟಿ ನೀಡಿದ್ದರೆ, ರಾಹುಲ್ ಗಾಂಧಿಗೆ ಪ್ರಿಯಾಂಕಾ ಗಾಂಧಿ ಶ್ಯೂರಿಟಿ ನೀಡಿದರು. ವಕೀಲ ಕಪಿಲ್ ಸಿಬಲ್ ಸೋನಿಯಾ ಮತ್ತು ರಾಹುಲ್ ಗಾಂಧಿ ಪರವಾಗಿ ವಾದ ಮಂಡನೆ ಮಾಡಿದರು.