ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಶೈಲಿ ಬಗ್ಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಾತ್ರವಲ್ಲ, ಅವಕಾಶ ಒದಗಿದರೆ ಅದು ಭಾರತದೊಂದಿಗೆ ಪುನಃ ವಿಲೀನವಾಗುವುದಕ್ಕೆ ಬಯಸುತ್ತದೆ!.
ಝೀನ್ಯೂಸ್ ಇಂಡಿಯಾ.ಕಾಂ ದಲ್ಲಿ ಪ್ರಕಟವಾದ ಸುದ್ಧಿಯೊಂದರ ಪ್ರಕಾರ, ಮೋದಿಯವರ ಆಡಳಿತ ಶೈಲಿಗೆ ಮಾರು ಹೋದ ಪಾಕ್ ಆಕ್ರಮಿತ ಕಾಶ್ಮೀರಿಗಳು ಬಹಿರಂಗವಾಗಿಯೇ ಭಾರತದೊಂದಿಗೆ ವಿಲೀನವಾಗಲು ಆಗ್ರಹಿಸುತ್ತಿದ್ದಾರೆ.
ಸಹಜವಾಗಿಯೇ ಇದು ಪಾಕಿಸ್ತಾನ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
2014ರಲ್ಲಿ ಬಂದ ಪ್ರವಾಹ ಹಾಗೂ 2015ರ ಭೂಕಂಪಕ್ಕೆ ಮೋದಿ ಸರಕಾರದ ಸ್ಪಂದನೆಯಿಂದ ಪ್ರಭಾವಿತರಾದ ಪಾಕ್ ಆಕ್ರಮಿತ ಪ್ರದೇಶಲ್ಲಿ ಭಾರತದ ಪರ ಅಲೆ ಎದ್ದಿದೆ.
ಇತ್ತೀಚೆಗೆ ಪಾಕ್ ಆಕ್ರಮಿತ ಕಾಶ್ಮೀರದ ಪ್ರವಾಸ ಮಾಡಿದ ಅಂಜುಮಾನ್ ಮಿನ್ಹಾಜ್-ಎ-ರಸೂಲ್ ಸಂಸ್ಥೆಯ ಅಧ್ಯಕ್ಷ ಮೌಲಾನಾ ಸೈಯದ್ ಅಥರ್ ಹುಸೇನ್ ದೆಹ್ಲಾವಿ ಅವರು, ಈ ಪ್ರದೇಶದಲ್ಲಿ ವಾಸಿಸುವ ಜನರು ಭಾರತದ ಭಾಗವಾಗಬೇಕೆಂದು ಬಯಸುತ್ತಾರೆ ಎಂದಿದ್ದಾರೆ.
ದಹ್ಲಾವಿ ಅವರ ಪ್ರಕಾರ, ಈ ಭಾಗದ ಜನರು ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಂದ ರೋಸಿ ಹೋಗಿದ್ದಾರೆ. ಅವರು ಶಾಂತಿಯುತ ಜೀವನ ನಡೆಸಲು ಇಛ್ಚಿಸುತ್ತಾರೆ. ಈ ಬಗ್ಗೆ ಜನಾಭಿಪ್ರಾಯ ನಡೆಸಬೇಕು ಹಾಗೂ ಅವರು ಭಾರತದೊಂದಿಗೆ ವಿಲೀನವಾಗಲು ಮತ ನೀಡುತ್ತಾರೆ.
ದಹ್ಲಾವಿ ಅವರು ಹೇಳುವಂತೆ, ಪಾಕ್ ಆಕ್ರಮಿತ ಕಾಶ್ಮೀರದ ಜನತೆ ಭಾರತದ ಬಗ್ಗೆ ಅತ್ಯಂತ ಗೌರವದ ಭಾವನೆ ಹೊಂದಿದ್ದಾರೆ ಹಾಗೂ ಅವಕಾಶ ಸಿಕ್ಕಿದರೆ ಖಂಡಿತವಾಗಿಯೂ ಅವರು ಭಾರತದ ನಾಗರಿಕರಾಗಲು ತಯಾರಿದ್ದಾರೆ.
ಅಲ್ಲದೆ, ಬಲೂಚಿಸ್ತಾನ ಹಾಗೂ ಕರಾಚಿಯಲ್ಲಿ ಸೆಲೆಸಿರುವ ಜನರೂ ಸಹ ಭಾರತದೊಂದಿಗೆ ಉತ್ತ್ಮ ಸಂಬಂಧ ಹೊಂದಲು ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ.
ಪಾಕ್ ಅಕ್ರಮಿತ ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಸ್ವಾತಂತ್ರ್ಯ ಪರವಾದ ಘೋಷಣೆಗಳು ಹೆಚ್ಚುತ್ತಿವೆ. ಇದು ಪಾಕ್ ಸರಕಾರಕ್ಕೆ ಆತಂಕ ಉಂಟುಮಾಡಿದೆ. ಪಾಕಿಸ್ತಾನದ ಮಾಧ್ಯಮ ಸಹ ಈ ಬೆಳವಣಿಗೆಗಳ ಬಗ್ಗೆ ವ್ಯಾಪಕವಾಗಿ ವರದಿ ಮಾಡುತ್ತಿದೆ.
ಸೆಪ್ಟೆಂಬರ್ 7, 2014ರಂದು ಪಿಒಕೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ವಿರುದ್ಧ ಅಲ್ಲಿಯ ಜನರು 'ನವಾಜ್ ಹಿಂದಕ್ಕೆ ಹೋಗಿ' ಎಂದು ಘೋಷಣೆಗಳನ್ನು ಕೂಗಿದ್ದರು. ಜನರ ಸಂಕಷ್ಟಕ್ಕೆ ಸ್ಪಂದಿಸದ ಪಾಕಿಸ್ತಾನ ಸರಕಾರದ ವಿರುದ್ಧ ಜನರು ತಮ್ಮ ತೀವ್ರ ಅಸಮಾಧಾವನ್ನು ಹೊರಹಾಕಿದ್ದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹದಗೆಟ್ಟ ಪರಿಸ್ಥಿತಿ ಬಗ್ಗೆ ಅರಿವಿದ್ದ ಪ್ರಧಾನಿ ಮೋದಿ ಕಾಶ್ಮೀರ ಕಣಿವೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಿಒಕೆ ಗೆ ಎಲ್ಲಾ ರೀತಿಯ ಸಹಾಯ ಕೊಡುವುದಾಗಿ ಪ್ರಸ್ತಾಪ ಮಾಡಿದ್ದರು.
ಪಿಒಕೆ ಜನರು ತಮ್ಮ ಪ್ರದೇಶದ ಜನರ ಸಮಸ್ಯೆಗಳಿಗೆ ಪಾಕಿಸ್ತಾನ ಸರಕಾರ ತೋರುವ ನಿರ್ಲಕ್ಷ್ಯ ಹಾಗೂ ಪಿಒಕೆಯನ್ನು ಭಯೋತ್ಪಾದಕರಿಗೆ ತರಬೇತಿ ನೀಡುವ ಕೇಂದ್ರಗಳಿಗಾಗಿ ಉಪಯೋಗಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದಾರೆ.