ನವದೆಹಲಿ : ವಿವಾದದ ಸುಳಿಯಲ್ಲಿ ಸಿಲುಕಿರುವ ಬಿಜೆಪಿ ಮುಖಂಡರ ರಾಜೀನಾಮೆಯವರೆಗೆ ಕಾಂಗ್ರೆಸ್ ಸಂಸತ್ತಿನಲ್ಲಿ ತನ್ನ ಪ್ರತಿಭಟನೆ ಮುಂದುವರಿಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುಧ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಮನ್ ಕಿ ಬಾತ್ ಚಾಂಪಿಯನ್ ಮೌನ್ ವೃತ ತಾಳಿದಂತಿದೆ. ತಾವು ಪ್ರತಿಪಕ್ಷದಲ್ಲಿದ್ದಾಗ ಕಲಾಪ ನಡೆಸಲು ಅಡ್ಡಿಪಡಿಸಿದವರಿಂದ ಇಂದು ನಾವು ಸಂಸದೀಯ ನಡವಳಿಕೆ ಬಗ್ಗೆ ಉಪದೇಶ ಕೇಳಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿಯವರೆ ವಿರುದ್ಧ ವಾಗ್ದಾಳಿ ಮುಂದುವರಿಸಿದ ಸೋನಿಯಾ ಗಾಂಧಿ, ಅವರು ತಾವು ಕೊಟ್ಟ ಭರವಸೆಗಳ ಬಗ್ಗೆ ತೊಂಬಾ ಹಗುರವಾಗಿದ್ದಂತಿದೆ, ಅವುಗಳನ್ನು ಈಡೇರಿಸುವಲ್ಲಿ ಅಸಮರ್ಥ ರಾಗಿದ್ದಾರೆ ಎಂದು ಅನಿಸುತ್ತದೆ. ಒಂದು ಕಡೆಯಲ್ಲಿ, ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಹೊಣೆಗಾರಿಕೆಯ ಬಗ್ಗೆ ಯಾವುದೇ ಸಂದರ್ಭದಲ್ಲೂ ತಮ್ಮ ನೈತಿಕತೆ ಬಗ್ಗೆ ತಮ್ಮ ಹಕ್ಕು ಪ್ರತಿಪಾದಿಸಲು ಅವಕಾಶ ತಪ್ಪಿಸಿಕೊೞುವುದಿಲ್ಲ ಆದರೆ ಇನ್ನೋಂದು ಕಡೆ, ವಿವಾದದಲ್ಲಿ ಸಿಲುಕಿ ಹಾಕಿಕೊಂಡಿರುವ ವಿದೇಶಾಂಗ ಸಚಿವೆ ಮತ್ತು ಇಬ್ಬರು ಮುಖ್ಯಮಂತ್ರಿಗಳ ವಿಷಯದಲ್ಲಿ ಮೌನ ತಾಳಿದ್ದಾರೆ ಎಂದು ಹೇಳಿದ್ದಾರೆ.
ಸೋನಿಯಾ ಗಾಂಧಿಯವರ ಈ ಮಾತುಗಳಿಂದ ಕಾಂಗ್ರೆಸ್ ನ ಮುಂದಿನ ನಡೆ ಸ್ಪಷ್ಟವಾಗುತ್ತದೆ.
ಸರ್ಕಾರ ಈ ವರ್ಷದ ಮುಂಗಾರು ಅಧಿವೇಶನದಲ್ಲಿ ಜಿ ಎಸ್ ಟಿ ಸೇರಿ ಒಟ್ಟು ೧೧ ವಿಧೇಯಕಗಳನ್ನು ಪ್ರಸ್ತುತ ಪಡಿಸಬೇಕಾಗಿತ್ತು. ಆದರೆ ಕಾಂಗ್ರೆಸ್ ಲಲಿತ್ ಗೇಟ್ ಹಗರಣದ ಸಂಬಂಧ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ವಸುಂಧರಾ ರಾಜೇ ಮತ್ತು ವ್ಯಾಪಂ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆಗೆ ಒತ್ತಾಯಿಸುತ್ತಿದೆ. ರಾಜೀನಾಮೆ ನಂತರ ಅಷ್ಟೇ ಚರ್ಚೆಗೆ ಸಿದ್ಧ ಎಮ್ದು ಹೇಳಿದೆ.