ಪಂಜಾಬ್ : ಉಗ್ರಗಾಮಿಗಳು ಸೋಮವಾರ ಬೆಳಗ್ಗೆ ಪಂಜಾಬ್ ನ ಗುರುದಾಸಪುರದಲ್ಲಿ ಬಸ್ ಮತ್ತು ಪೋಲಿಸ್ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಒಟ್ಟು 11 ಜನ ಸಾವನ್ನಪಿದ್ದು ಇನ್ನೂ ಹಲವರಿಗೆ ಗಾಯಗಳಾಗಿವೆ.
3-4 ಜನರ ಉಗ್ರಗಾಮಿ ತಂಡವೊಂದು ಸೇನಾ ಸಮವಸ್ತ್ರದಲ್ಲಿ ಜಮ್ಮುವಿನ ಹೀರಾನಗರ್ ಗಡಿಯಿಂದ ಭಾರತದ ಒಳಗೆ ನುಸುಳಿ ಈ ಕೃತ್ಯ ಎಸೆದಿದ್ದಾರೆ ಎನ್ನಲಾಗಿದೆ. ಕಾರಿನಲ್ಲಿ ಆಗಮಿಸಿದ ಉಗ್ರರು ಮೊದಲು ಬಸ್ಸಿನ ಮೇಲೆ ಗುಂಡಿನ ದಾಳಿ ನಡೆಸಿದ, ನಂತರ ಪೋಲಿಸ್ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಐವರು ಪೋಲಿಸರು ಮೂವರು ನಾಗರೀಕರು ಮತ್ತು ಮೂವರು ಉಗ್ರರು ಮೃತ ಪಟ್ಟಿರುವ ವರದಿಯಾಗಿದೆ.
ಉಗ್ರರು ದೀನಾ ನಗರ ಪೊಲೀಸ್ ಠಾಣೆಗೆ ನುಗ್ಗಿ ಅಲ್ಲಿ ಗುಂಡಿನ ದಾಳಿ ನಡೆಸಿ ಹಂತದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಉಗ್ರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಉಗ್ರರು ಪೊಲೀಸ್ ಠಾಣೆಯಲ್ಲಿ ಅಡಗಿದ್ದು, ಪೊಲೀಸರ ಮೇಲೆ ದಾಳಿ ನಡೆಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಗುರುದಾಸಪುರ ಪಠಾಣ್ ಕೋಟ್ ನಡುವಿನ ರೈಲ್ವೆ ಮಾರ್ಗದಲ್ಲಿ 5 ಜೀವಂತ ಬಾಂಬುಗಳು ಪತ್ತೆಯಾಗಿದ್ದು, ಉಗ್ರರು ಬಾಂಬ್ ಇಟ್ಟಿರುವ ಶಂಕೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಭಾರತ ಪಾಕೀಸ್ತಾನ ಗಡಿಯಲ್ಲಿ ಜಾಗರೂಕರಾಗಿರಲು ಬಿ ಎಸ್ ಎಫ್ ಗೆ ತಿಳಿಸಿದ್ದೇನೆ. ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರೊಂದಿಗೆ ಮಾತುಕತೆ ನಡೆಸಿ ಘಟನೆಯ ವಿವರ ಪಡೆದಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚಿನ ಬೆಳವಣಿಗೆಗಳು :
* 3 ಉಗ್ರರನ್ನೂ ಹತ್ಯೆಗೈದ ಪೊಲೀಸರು, ಉಗ್ರರ ದಾಳಿ ಅಂತ್ಯ.
* ನಾವು ಪಾಕೀಸ್ತಾನದ ಜೊತೆ ಶಾಂತಿ ಬಯಸುತ್ತೇವೆ ಆದರೆ ರಾಷ್ಟ್ರೀಯ ಗೌರವವನ್ನು ಬಲಿಕೊಟ್ಟಲ್ಲ. ನಾವಾಗಿಯೇ ಮೊದಲು ದಾಳಿ ನಡೆಸಿಲ್ಲ. ಆದರೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ - ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್
* ಎಸ್ಪಿ ಸೇರಿ ಮೂವರು ಪೋಲಿಸರು ಮತ್ತು ಮೂವರು ನಾಗರೀಕರು, ಒಟ್ಟು 6 ಜನರ ಬಲಿ.
* ನಾಲ್ಕು ಉಗ್ರರಲ್ಲಿ ಇಬ್ಬರು ಸಾವನ್ನಪ್ಪಿರುವ ವರದಿಯಾಗಿದೆ.
* ಸಂಸತ್ತಿನಲ್ಲಿ ಘಟನೆಯ ವಿವರ ನೀಡಲಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ
* ಸೇನಾಪಡೆಗಳಿಂದ ಒಬ್ಬ ಉಗ್ರನ ಹತ್ಯೆ - ಟೈಮ್ಸ್ ಆಫ್ ಇಂಡಿಯಾ ವರದಿ
* ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತಾಧಿಕಾರಿಗಳ ಸಭೆ ಪ್ರಾರಂಭ. ಸಭೆಯಲ್ಲಿ ಕೇಂದ್ರ ಸಚಿವರುಗಳಾದ ಮನೋಹರ್ ಪಾರೀಕ್ಕರ್, ಅರುಣ್ ಜೇಟ್ಲಿ ಮತ್ತು ವೆಂಕಯ್ಯ ನಾಯ್ಡು ಉಪಸ್ಥಿತಿ.
* ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮುಖ ಸಚಿವರೊಂದಿಗೆ ಬೆಳಗ್ಗೆ 10:30 ಕ್ಕೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಎಲ್ ಸಿ ಗೋಯಲ್ ಭಾಗವಹಿಸಲಿದ್ದಾರೆ.
* ಉಗ್ರರು ಪಾಕೀಸ್ತಾನದ ನರೋಲಾದವರು - ಗುಪ್ತಚರ ಇಲಾಖೆ
* ಉಗ್ರರು ದೀನಾನಗರ್ ಪೊಲೀಸ್ ಠಾಣೆಯಲ್ಲಿ ಅಡಗಿದ್ದು, ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆಸುತ್ತಿದ್ದಾರೆ.
* ದೀನಾನಗರ್ ಪೋಲಿಸ್ ಠಾಣೆಯ ಮೇಲೆ ಸೋಮವಾರ ಬೆಳಗ್ಗೆ 5.45 ಕ್ಕೆ ದಾಳಿ ನಡೆಸುವ ಮೊದಲು ಪಂಜಾಬ್ ನ ರಸ್ತೆ ಸಾರಿಗೆ ಬಸ್ ನ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
* ದೀನಾನಗರ್ ಪೋಲಿಸ್ ಠಾಣೆಯ ಸಮೀಪದ ರೈಲ್ವೆ ಮಾರ್ಗದಲ್ಲಿ 5 ಜೀವಂತ ಬಾಂಬ್ ಪತ್ತೆ.
* ಅಮೃತಸರ ಮತ್ತು ಪಠಾಣ್ ಕೋಟ್ ನಡುವಿನ ರೈಲು ಸಂಚಾರ ಬಂದ್
* ಬೆಳಗಿನಜಾವ ಸುಮಾರು 2 ಗಂಟೆಗೆ ಗಡಿ ದಾಟಿದ ಉಗ್ರರು ಬಿಳಿ ಮಾರುತಿ ಆಲ್ಟೋ ಕಾರಿನಲ್ಲಿ ಪೋಲಿಸ್ ಠಾಣೆ ಬಳಿ ಬಂದಿದ್ದಾರೆ ಎನ್ನಲಾಗಿದೆ.
* ದಾಳಿ ನಡೆದ ಸ್ಥಳ ತಲುಪಿದ ಸೇನೆ.
* ಎನ್ ಎಸ್ ಜಿ ಕಮಾಂಡೊಗಳು ದಾಳಿ ನಡೆದ ಸ್ಥಳಕ್ಕೆ ಧಾವಿಸಿದ್ದಾರೆ.
* ಗುರುದಾಸಪುರದ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ.
* ಪ್ರತಿದಾಳಿ ನಡೆಸಲು ಸಹಾಯ ಮಾಡುವುದಕ್ಕಾಗಿ ದಾಳಿ ನಡೆದ ಸ್ಥಳದಲ್ಲಿರುವ ಸೇನಾ ಹೆಲಿಕಾಪ್ಟರ್ ಗಳು.