ನವದೆಹಲಿ : ಮ್ಯಾನ್ಮಾರ್ ದೇಶದ ಗಡಿಯೊಳಗೆ ನುಗ್ಗಿ 45 ನಿಮಿಷಗಳ ಕಾರ್ಯಾಚರಣೆ ನಡೆಸಿರುವ ಭಾರತೀಯ ಸೇನಾ ಪಡೆ ಸುಮಾರು 100ಕ್ಕೂ ಅಧಿಕ ಈಶಾನ್ಯ ನಾಗಾ ಉಗ್ರರನ್ನು ಹತ್ಯೆಗೈದಿರುವ ಸಾಧ್ಯತೆ ಇದ್ದಿರುವುದಾಗಿ ಗೃಹಸಚಿವಾಲಯದ ಮೂಲಗಳು ತಿಳಿಸಿರುವುದಾಗಿ ಹೇಳಲಾಗಿದೆ.
ಇತ್ತೀಚೆಗೆ ಮಣಿಪುರದಲ್ಲಿ ಸೇನಾ ನೆಲೆ ಮೇಲೆ ದಾಳಿ ನಡೆಸಿ 18 ಯೋಧರನ್ನು ಹತ್ಯೆ ಮಾಡಿದ್ದ ನಾಗಾ ಉಗ್ರರ ತಂಡದ ಮೇಲೆ ಭಾರತೀಯ ಸೇನಾ ಪಡೆಯ ಕಮಾಂಡೋಗಳು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ನೂರಕ್ಕೂ ಅಧಿಕ ಉಗ್ರರು ಬಲಿಯಾಗಿರುವುದಾಗಿ ಶಂಕಿಸಲಾಗಿದೆ.
ಭಾರತೀಯ ಸೇನಾ ಕಮಾಂಡೋಗಳ ದಾಳಿ ಸಂದರ್ಭದಲ್ಲಿ ಉಗ್ರರಿಂದ ಒಂದೇ ಒಂದು ಗುಂಡಿನ ಪ್ರತಿದಾಳಿ ನಡೆದಿಲ್ಲವಾಗಿತ್ತು. ಕಾರ್ಯಾಚರಣೆಯಲ್ಲಿ ಆರು ಮಂದಿ ಬಂಡುಕೋರರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.