ಕೋಲ್ಕತ್ತಾ : ಪ್ರಧಾನಿ ನರೇಂದ್ರ ಮೋದಿ, ವೃದ್ಧಾಷ್ಯದ ಸಮಸ್ಯೆಯಿಂದ ಬಳುತ್ತಿರುವ ಆತ್ಮಾಸ್ಥಾನಂದ್ ಮಹಾರಾಜ್ ಅವರ ಯೋಗ ಕ್ಷೇಮ ವಿಚಾರಿಸಿದರು.
ತಮ್ಮ ಜೀವನದ ದಿಕ್ಕು ಬದಲಿಸಿದ ಗುರುಗಳನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಗುರುಗಳ ಸಾನಿಧ್ಯದಲ್ಲಿ ಕೆಲಹೊತ್ತು ಭಾವುಕರಾದರು. ಕೊಲ್ಕತ್ತಾದಲ್ಲಿರುವ ರಾಮಕೃಷ್ಣ ಮಠಕ್ಕೆ ಭಾನುವಾರ ಭೇಟಿ ನೀಡಿದ ಮೋದಿ, ಮಠದ ಸ್ವಾಮಿ ಆತ್ಮಾಸ್ಥಾನಂದ್ ಮಹಾರಾಜ್ ಅವರ ಯೋಗ ಕ್ಷೇಮ ವಿಚಾರಿಸಿದರು. ಈ ವೇಳೆ ವೃದ್ಧಾಷ್ಯದ ಸಮಸ್ಯೆಯಿಂದ ಬಳುತ್ತಿರುವ ಆತ್ಮಾಸ್ಥಾನಂದ್ ಮಹಾರಾಜ್ ಅವರನ್ನು ಕಂಡು ಪ್ರಧಾನಿ ಭಾವುಕರಾದರು.
ರಾಮಕೃಷ್ಣ ಮಠದ ಕೇಂದ್ರ ಕಚೇರಿ ಇರುವ ಬೇಲೂರು ಮಠಕ್ಕೆ ತೆರಳಿದ ಮೋದಿ, ಅಲ್ಲಿ ವಿವೇಕಾನಂದರು ವಾಸವಿದ್ದ ಕೊಠಡಿಯಲ್ಲಿ ಕೆಲ ಕಾಲ ಧ್ಯಾನ ಮಾಡಿದರು. ಆತ್ಮಾಸ್ಥಾನಂದ ಮಹಾರಾಜ್ ಸ್ವಾಮೀಜಿ ಅವರನ್ನು ಮೋದಿ ಗುರು ಎಂದು ಭಾವಿಸುತ್ತಾರೆ.
ಹಿಂದೊಮ್ಮೆ ಸ್ವಾಮೀಜಿ ರಾಜಕೋಟ್ ನಲ್ಲಿದ್ದಾಗ ಮೋದಿ ಮಾರ್ಗದರ್ಶನಕ್ಕಾಗಿ ಆಗಾಗ್ಗೆ ಭೇಟಿ ಆಗುತ್ತಿದ್ದರಂತೆ. ಅಷ್ಟೇ ಅಲ್ಲ, ಹಿಂದೊಮ್ಮೆ ಸನ್ಯಾಸಿ ಆಗ ಬಯಸಿದ್ದ ಮೋದಿ ಅವರ ದಿಕ್ಕನ್ನು ಈ ಗುರುಗಳು ಬದಲಾಯಿಸಿದ್ದರಂತೆ. ಸನ್ಯಾಸ್ಯತ್ವ ಸ್ವೀಕರಿಸಲು ಮೋದಿ ಮೊರೆ ಹೋಗಿದ್ದು, ಆತ್ಮಾಸ್ಥಾನಂದ ಮಹಾರಾಜ್ ಮೋದಿಯವರ ಮನವಿಯನ್ನು ತಿರಸ್ಕರಿಸಿದ್ದರಂತೆ.