ಅಲಹಾಬಾದ್ : ಭೂಕಂಪಕ್ಕೆ ತುತ್ತಾಗಿರುವ ನೇಪಾಳಕ್ಕೆ ಭಾರತ ಸರ್ಕಾರ ಮಾತ್ರವಲ್ಲದೇ ಭಾರತದ ಅನೇಕ ಸಂಘಟನೆಗಳೂ ಸಹ ಸಹಾಯ ಮಾಡಲು ಮುಂದಾಗುತ್ತಿವೆ. ವಿಶ್ವಹಿಂದೂ ಪರಿಷತ್ ಸಹ ನೇಪಾಳಕ್ಕೆ ನೆರವು ನೀಡುವುದಾಗಿ ಘೋಷಿಸಿದೆ.
ಭೂಕಂಪದಿಂದ ನಿರಾಶ್ರಿತಗೊಂಡವರಿಗೆ ಮನೆ ನಿರ್ಮಿಸಿಕೊಡುವುದು, ಪ್ರಕೃತಿ ವಿಕೋಪದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ಭಾರತಕ್ಕೆ ಕರೆತಂದು ವಿದ್ಯಾಭ್ಯಾಸ ನೀಡುವುದು ಸೇರಿದಂತೆ ಹಲವು ರೀತಿಯಲ್ಲಿ ವಿಶ್ವಹಿಂದೂ ಪರಿಷತ್ ನೇಪಾಳಕ್ಕೆ ಸಹಾಯ ಮಾಡಲು ಮುಂದಾಗಿದೆ.
ಭಾರತದಲ್ಲಿರುವ ವಿಶ್ವಹಿಂದೂ ಪರಿಶತ್ ನ ಸುಮಾರು 150 ವಸತಿ ಶಾಲೆಗಳಲ್ಲಿ ಹಾಗು 50 ಅನಾಥಾಶ್ರಮಗಳಿಗೆ ಅನಾಥ ಮಕ್ಕಳನ್ನು ಕರೆತಂದು ಅವರ ಭವಿಷ್ಯವನ್ನು ರೂಪಿಸಲಾಗುವುದು ಎಂದು ವಿ.ಹೆಚ್.ಪಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.
ನೇಪಾಳದಂತೆಯೇ ಅನೇಕ ಸ್ಥಳಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ಕರೆತಂದು ಪೋಷಿಸಲಾಗಿದೆ. ಈಗ ಅವರಲ್ಲಿ ಅನೇಕರು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ಹಾಗೆಯೇ ನೇಪಾಳದ ಮಕ್ಕಳಿಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಎಲ್ಲಾ ರೀತಿಯ ನೆರವು ನೀಡುವುದಾಗಿ ಎಂದು ತೊಗಾಡಿಯಾ ಭರವಸೆ ನೀಡಿದ್ದಾರೆ.
ಭೂಕಂಪ ಸಂಭವಿಸಿರುವ ಹಿನ್ನೆಲೆಯಲ್ಲಿ ಪ್ರವೀಣ್ ತೊಗಾಡಿಯಾ ನೇಪಾಳಾಕ್ಕೆ ತೆರಳಿದ್ದಾರೆ. ಇದೇ ವೇಳೆ ನೇಪಾಳದಲ್ಲಿ ಭೂಕಂಪಕ್ಕೆ ಸಿಲುಕಿ ನೆಲಸಮವಾಗಿರುವ ದೇವಾಲಯ&id=18118'>ದೇವಾಲಯಗಳ ಪುನರ್ನಿರ್ಮಾಣ, ಐತಿಹಾಸಿಕ ಕಟ್ಟಡಗಳ ನವೀಕರಣ ಕಾರ್ಯಕ್ಕೆ ಸಹ ವಿಶ್ವಹಿಂದೂ ಪರಿಷತ್ ಸಂಪೂರ್ಣ ನೆರವು ನೀಡಲಿದೆ ಎಂದು ತೊಗಾಡಿಯಾ ಘೋಷಿಸಿದ್ದಾರೆ.