ರಾಯ್ ಪುರ : ಛತ್ತೀಸ್ ಗಢದಲ್ಲಿ ಅಟ್ಟಹಾಸ ಮುಂದುವರಿಸಿರುವ ನಕ್ಸಲರು ಭದ್ರತಾ ಪಡೆಗಳ ಮೇಲೆ ಗುಂಡು ಹಾಗೂ ನೆಲಬಾಂಬ್ ಬಳಸಿ ಮತ್ತೆರಡು ದಾಳಿಗಳನ್ನು ನಡೆಸಿದ್ದಾರೆ. ಈ ಘಟನೆಗಳಲ್ಲಿ 6 ಯೋಧರು ಹತರಾಗಿ, 8 ಮಂದಿ ಯೋಧರು ತೀವ್ರವಾಗಿ ಗಾಯಗೊಂಡಿದ್ದಾರೆ.
ಶನಿವಾರದಿಂದ ಮಾವೋವಾದಿ ನಕ್ಸಲರು ನಡೆಸುತ್ತಿರುವ ನಾಲ್ಕನೇ ದಾಳಿ ಇದಾಗಿದ್ದು, ಈವರೆಗೆ ಎಂಟು ಯೋಧರು ಬಲಿಯಾದಂತಾಗಿದೆ.
ದಂತೇವಾಡ ಜಿಲ್ಲೆಯಲ್ಲಿ ನಕ್ಸಲರು ನೆಲ ಬಾಂಬ್ ಸ್ಫೋಟಿಸಿದ ಪರಿಣಾಮ ಭದ್ರತಾ ಪಡೆಯ 6 ಮಂದಿ ಯೋಧರು ಸಾವನ್ನಪ್ಪಿದ್ದು, ಇತರೆ 8 ಜನ ತೀವ್ರವಾಗಿ ಗಾಯ ಗೊಂಡಿದ್ದಾರೆ. ಗಸ್ತು ತಿರುಗುತ್ತಿದ್ದ ಯೋಧರ ವಾಹನವನ್ನು ಗುರಿಯಾಗಿಸಿ ಚೋಲಾರ್- ಕಿರಾಂಡುಲ್ ಮಾರ್ಗದಲ್ಲಿ ನೆಲಬಾಂಬ್ ಗಳನ್ನು ಹುಗಿದಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.