Untitled Document
Sign Up | Login    
Dynamic website and Portals
  
April 10, 2015

ನಗರದಲ್ಲಿ ರಾತ್ರಿಯಿಂದ 24 ತಾಸು ವಿದ್ಯುತ್ತಿಲ್ಲ

ನಗರದಲ್ಲಿ ರಾತ್ರಿಯಿಂದ 24 ತಾಸು ವಿದ್ಯುತ್ತಿಲ್ಲ

BW News Bureau : ಸತತ 24 ಗಂಟೆಗೆ ಅರ್ಧಕ್ಕರ್ಧ ಬೆಂಗಳೂರು ಕತ್ತಲೆಯಲ್ಲಿ ಮುಳುಗಲಿದೆ.. ಹೌದು ಶುಕ್ರವಾರ ರಾತ್ರಿ 10ರಿಂದ ಶನಿವಾರ ರಾತ್ರಿ 10ರವರೆಗೆ ನಗರದ ಬಹುತೇಕ ಎಲ್ಲ ಪ್ರಮುಖ ಪ್ರದೇಶಗಳ ಆಯ್ದ ಬಡಾವಣೆಗಳಲ್ಲಿ ವಿದ್ಯುತ್‌ ಸಂಪರ್ಕ ಇರುವುದಿಲ್ಲ. ಹಾಗಾಗಿ, ಇದರ ಬಿಸಿ ಬಹುತೇಕ ಆಸ್ಪತ್ರೆಗಳು, ವಾಣಿಜ್ಯ-ಉದ್ಯಮಗಳು ಸೇರಿದಂತೆ ವಿವಿಧ ಪ್ರಕಾರದ ಗ್ರಾಹಕರಿಗೆ ತುಸು ಜೋರಾಗಿಯೇ ತಟ್ಟಲಿದೆ.

ಅಷ್ಟೇ ಅಲ್ಲ, ವಾರಾಂತ್ಯದಂದು ಗ್ರಾಹಕರು ಕತ್ತಲೆಯಲ್ಲಿ ಕಾಲ ಕಳೆಯಬೇಕಾಗಿದೆ. ಈ ವಿದ್ಯುತ್‌ ವ್ಯತ್ಯಯಕ್ಕೆ ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ಕಾರಣ ನೀಡಿದೆ. ವಿದ್ಯುತ್‌ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳ ವಿವರ ಹೀಗಿದೆ.

ಹನುಮಂತ ನಗರ, ತ್ಯಾಗರಾಜನಗರ, ನಾಗೇಂದ್ರ ಬ್ಲಾಕ್‌, ಚಾಮರಾಜಪೇಟೆ, ಶಂಕರಪುರ, ರಾಜರಾಜೇಶ್ವರಿ ನಗರ, ಗೋರಿಪಾಳ್ಯ, ಸೌರಾಷ್ಟ್ರ ಪೇಟೆ, ಮಾಗಡಿ ರಸ್ತೆ, ಗಾಂಧಿನಗರ, ಕಾಟನ್‌ಪೇಟೆ, ಆರ್‌.ಟಿ.ರಸ್ತೆ, ವಸಂತನಗರ, ಆನಂದ್‌ ರಾವ್‌ ವೃತ್ತ, ಶೇಷಾದ್ರಿ ರಸ್ತೆ, ರಾಜಭವನ, ಹೈಕೋರ್ಟ್‌, ವಿಧಾನಸೌಧ, ಸಿಎಂ ನಿವಾಸ, ಎಲ್ಲಾ ಸ್ಟಾರ್‌ ಹೋಟೆಲ್‌ ಗ‌ಳು, ಬೆಸ್ಕಾಂ ಕಾರ್ಪೊರೇಟ್‌ ಕಚೇರಿ, ಕಬ್ಬನ್‌ಪೇಟೆ ನಗರ್ತಪೇಟೆ, ಸಿಟಿ ಮಾರುಕಟ್ಟೆಯ ಕಲಾಸಿಪಾಳ್ಯ, ವಿಕ್ಟೋರಿಯಾ ಆಸ್ಪತ್ರೆ ಸುತ್ತಲಿನ ಪ್ರದೇಶ, ಆಸ್ಟಿನ್‌ ಟೌನ್‌ನ ವಿಕ್ಟೋರಿಯಾ ಬಡಾವಣೆ, ನೀಲಸಂದ್ರ, ವಿವೇಕ್‌ನಗರ, ವನ್ನಾರ್‌ಪೇಟೆ, ಈಜಿಪುರ, ಮುರುಗೇಶಪಾಳ್ಯದ ಬಲಭಾಗದ ದೊಮ್ಮಲೂರು ಬಡಾವಣೆ ಮತ್ತು ಎಚ್‌ಎಎಲ್‌, ಕೊನೇನ ಅಗ್ರಹಾರ, ಚಲ್ಲಘಟ್ಟ, ನಾಗಸಂದ್ರ, ಇಸ್ರೋ ಕ್ವಾಟ್ರಸ್‌, ವಿನಾಯಕನಗರ, ಅಮರಜ್ಯೋತಿ ಲೇಔಟ್‌, ಕೋರಮಂಗಲ ವ್ಯಾಪ್ತಿಯಲ್ಲಿನ ಕೋರಮಂಗಲ 1 ಮತ್ತು 3ರಿಂದ 8ನೇ ಬ್ಲಾಕ್‌, ಸಿಎಆರ್‌ಪಿ ಕಾಂಪೌಂಡ್‌, ಆಡುಗೋಡಿ ಪೊಲೀಸ್‌ ಕ್ವಾಟ್ರಸ್‌, ನ್ಯಾಷನಲ್‌ ಗೇಮ್ಸ್‌ ವಿಲೇಜ್‌, ಸೇಂಟ್‌ ಜಾನ್‌ ವೈದ್ಯಕೀಯ ಕಾಲೇಜು ಮತ್ತು ಕ್ವಾಟ್ರìಸ್‌, ಜಕ್ಕಸಂದ್ರ, ಬಿಟಿಎಂ ಲೇಔಟ್‌, ಮಡಿವಾಳ, ಡಾಲರ್ ಸ್ಕೀಂ, ಚಿಕ್ಕ ಆಡುಗೋಡಿ, ಎಚ್‌ಎಎಲ್‌ ವ್ಯಾಪ್ತಿ, ಪ್ರಕಾಶನಗರ ವ್ಯಾಪ್ತಿ, ಮಲ್ಲೇಶ್ವರ ವ್ಯಾಪ್ತಿ, ಸದಾಶಿವನಗರ, ಶ್ರೀರಾಂಪುರ ಅದೇ ರೀತಿ, ಮತ್ತಿಕೆರೆ ವ್ಯಾಪ್ತಿ, ಗಾಂಧಿಬಜಾರ್‌ ವ್ಯಾಪ್ತಿಯಲ್ಲಿ ಬರುವ ಪ್ರದೇಶ, ಬ್ಯಾಟರಾಯನಪುರ ವ್ಯಾಪ್ತಿಯ ಪ್ರದೇಶಗಳು, ನಾಯಂಡಹಳ್ಳಿ ಸುತ್ತಮುತ್ತಲಿ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited