ಲಖ್ನೌ : ದೇಶಾದ್ಯಂತ ನಡೆಯುತ್ತಿರುವ ಗೋಹತ್ಯಾ ನಿಷೇಧದ ಚರ್ಚೆಗೆ ದ್ವಾರಕಾ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮಿಗಳೂ ಧ್ವನಿಗೂಡಿಸಿದ್ದಾರೆ. ಗೋವುಗಳನ್ನು ರಕ್ಷಿಸಲು ಕೇಂದ್ರ ಸರ್ಕಾರ ಕಾನೂನು ಜಾರಿ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ಗೋವುಗಳ ರಕ್ಷಣೆ ಮಾಡುವುದರೊಂದಿಗೆ ರಾಷ್ಟ್ರಾದ್ಯಂತ ಗೋಮಾಂಸ ಮಾರಾಟವನ್ನು ನಿಷೇಧಿಸಬೇಕು ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ನಡೆದ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸ್ವರೂಪಾನಂದ ಸರಸ್ವತಿ ಸ್ವಾಮಿಗಳು, ಗೋವುಗಳನ್ನು ರಕ್ಷಿಸುವುದಕ್ಕೆ ಹಾಗೂ ಗೋಮಾಂಸ ಮಾರಾಟ ನಿಷೇಧಿಸುವುದಕ್ಕೆ ಕಾನೂನು ಜಾರಿ ಮಾಡಲು ಇದು ಸೂಕ್ತ ಸಮಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗೋಮಾಂಸ ಮಾರಾಟ ನಿಷೇಧಿಸಿರುವುದನ್ನು ವಿರೋಧಿಸಿರುವ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ.ಮಾರ್ಕಾಂಡೆಯ ಕಾಟ್ಜು ಅವರ ವಿರುದ್ಧ ಸ್ವರೂಪಾನಂದ ಸರಸ್ವತಿ ಸ್ವಾಮಿಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.