ಢಾಕಾ : 'ಧಾರ್ಮಿಕ ಮೂಲಭೂತ'ವಾದದ ವಿರುದ್ಧ ಧ್ವನಿ ಎತ್ತಿದ್ದ ಬಾಂಗ್ಲಾ ಮೂಲದ ಅಮೆರಿಕನ್ ಪ್ರಜೆ ಅವಿಜಿತ್ ರಾಯ್ ಅವರ ಹತ್ಯೆಯ ಬೆನ್ನಲ್ಲೇ, ಬಾಂಗ್ಲಾದಲ್ಲಿ ಮತ್ತೋರ್ವ ಬ್ಲಾಗರ್ ನ ಕೊಲೆಯಾಗಿದೆ.
ಮಾ.30ರಂದು ಪ್ರಕಟವಾಗಿರುವ ಎ.ಎಫ್.ಪಿ, ವರದಿ ಪ್ರಕಾರ, ವಾಷಿಕುರ್ ರೆಹಮಾನ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಬಾಂಗ್ಲಾ ರಾಜಧಾನಿ ಢಾಕದಲ್ಲಿರುವ ರೆಹಮಾನ್ ಅವರ ನಿವಾಸದಿಂದ ಕೇವಲ 500 ಯಾರ್ಡ್ ಗಳಷ್ಟು ದೂರದಲ್ಲಿ ಈ ವ್ಯಕ್ತಿಯ ಹತ್ಯೆ ಮಾಡಲಾಗಿದೆ. ಹತ್ಯೆಗೆ ಕಾರಣ ಏನು ಎಂಬುದು ಈ ವರೆಗೂ ತಿಳಿದುಬಂದಿಲ್ಲ.
ಇದೇ ಮಾದರಿಯಲ್ಲಿ ಬ್ಲಾಗರ್ ಅವಿಜಿತ್ ರಾಯ್ ಅವರನ್ನೂ ಸಹ ಹತ್ಯೆ ಮಾಡಲಾಗಿತ್ತು. ಧಾರ್ಮಿಕ ಮೂಲಭೂತವಾದದ ವಿರುದ್ಧ ಸದಾ ಧ್ವನಿ ಎತ್ತಿ ನಿಷ್ಪಕ್ಷಪಾತದಿಂದ ಮಾತನಾಡುತ್ತಿದ್ದ ಅವಿಜಿತ್ ರಾಯ್ ಢಾಕಾದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಧರ್ಮಾಂಧ ಮೂಲಭೂತವಾದಿಗಳು ಅವರನ್ನು ಹರಿತವಾದ ಆಯುಧದಿಂದ ಕೊಚ್ಚಿ ಕೊಂದಿದ್ದರು. ಅಲ್ಲದೇ ಅವಿಜಿತ್ ರಾಯ್ ಅವರ ಪತ್ನಿಯ ಮೇಲೂ ಹಲ್ಲೆ ನಡೆಸಿದ್ದರು.