BW News Bureau : 'ಜಯಪ್ರಕಾಶ ವಲಯೋತ್ಸವ' ಎಲ್ಲರ ಬದುಕಿಗೆ ಅರ್ಥ ನೀಡುವಂತಹ ಶಬ್ದಗಳು ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಹೇಳಿದ್ದಾರೆ.
ಅಕ್ಷಯನಗರದ ವಾದಿರಾಜ ಕಲಾಭವನದಲ್ಲಿ ಆಯೋಜಿಸಲಾಗಿದ್ದ ಮಾತೃವಾತ್ಸಲ್ಯ ಅಭಿಯಾನ ಮತ್ತು ಜಯಪ್ರಕಾಶ ವಲಯೋತ್ಸವದಲ್ಲಿ ನಡೆದ ಕುಂಕುಮಾರ್ಚನೆ ಏಕಾದಶ ರುದ್ರದ ಕಾರ್ಯಕ್ರಮದ ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಎಲ್ಲಿ ಆನಂದದ ಅವಿರ್ಭಾವ ಇದೆಯೋ ಅದನ್ನೇ ಉತ್ಸವ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.
ಒಂದಾಗಿ ಹಾಡುವಂಥದ್ದು ಪೂಜೆ ಮಾಡುವುದು ಗುರುದರ್ಶನ ಮಾಡುವುದು ಸಮಾಜದ ಚಿಂತೆ ಮಾಡುವುದು ಸರಿಯಾದ ಕಾರ್ಯಗಳಾಗುತ್ತವೆ. ಜೀವನದಲ್ಲಿ ಸಂತೋಷದಿಂದರಬೇಕೆಂಬುದು ಎಲ್ಲರ ಬಯಕೆ ನಾವು ಅನುಭವಿಸುವ ಆನಂದ ಸಾತ್ವಿಕವಾದದ್ದು ಎಂದು ತಿಳಿಸಿದರು.
ಜಯಪ್ರಕಾಶ ವಲಯೋತ್ಸವದಲ್ಲಿ ರಾಮಚಂದ್ರಾಪುರ ಮಠದ ಅನೇಕ ಭಕ್ತರು, ಮಹಾಮಂಡಳದ ಕೋಶಾಧ್ಯಕ್ಷ ಜೆ.ರಾಮಚಂದ್ರಭಟ್, ಉಪಾಧ್ಯಕ್ಷ ಸೀತಾರಾಮ್ ಭಟ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.