ನವದೆಹಲಿ : 2014-15ನೇ ಸಾಲಿನ ಪದ್ಮ ಪ್ರಶಸ್ತಿ&id=17001'>ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಆರು ಜನ ಗಣ್ಯರಿಗೆ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆ ಹಾಗೂ ಐವರು ಗಣ್ಯರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಹಿರಿಯ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ, ಯೋಗ ಗುರು ಬಾಬಾರಾಮ್ ದೇವ್,ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ, ಬಾಲಿವುಡ್ ಹಿರಿಯ ನಟರಾದ ದಿಲೀಪ್ ಕುಮಾರ್, ಅಮಿತಾಭ್ ಬಚನ್ ಅವರಿಗೆ ಪದ್ಮ ವಿಭೂಷಣ ಗೌರವ ಪ್ರಕಟಿಸಲಾಗಿದೆ.
ಎನ್.ಗೋಪಾಲಸ್ವಾಮಿ, ಕೆ.ಎಸ್.ವಾಜಪೇಯಿ, ಪಿ.ವಿ.ರಾಜಾರಾಮನ್, ವಕಿಲ ಹರೀಶ್ ಸಾಳ್ವೆ, ಅಶೋಕ್ ಗುಲಾಟಿಯವರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಇನ್ನು ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು, ಭಾರತದ ಹಾಕಿ ಆಟಗಾರ ಸರ್ದಾರ್ ಸಿಂಗ್, ಪರ್ವತಾರೋಹಿಣಿ ಅರುಣಿಮಾ ಸಿನ್ಹಾ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.