ನವದೆಹಲಿ : ಅಮರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತ ಬೇಟಿ ಹಿನ್ನಲೆಯಲ್ಲಿ ಅಭೂತಪೂರ್ವ ಭದ್ರತಾ ವ್ಯವಸ್ಥೆಯನ್ನು ನಿಯೋಜಿಸಲಾಗುತ್ತಿದೆ. ಆದರೆ ಗಣರಾಜ್ಯೋತ್ಸವ ನಡೆಯಲಿರುವ ದೆಹಲಿಯ ರಾಜಪಥ್ ನ ಸುತ್ತಮುತ್ತ ಯಾವುದೇ ವಿಮಾನಗಳು ಹಾರಾಟ ನಡೆಸದಂತೆ ಒಬಾಮಾ ಭದ್ರತಾ ಪಡೆ ಮಾಡಿದ ಮನವಿಯನ್ನು ಭಾರತ ಸರ್ಕಾರ ತಿರಸ್ಕರಿಸಿದೆ.
ಗಣರಾಜ್ಯೋತ್ಸವ ನಡೆಯುವ ದಿನ ರಾಜಪಥ್ ಪ್ರದೇಶದ ಮೇಲೆ ವೈಮಾನಿಕ ಪ್ರರ್ದಶನ ಭಾರತದ ಸಂಪ್ರದಾಯವಾಗಿದ್ದು ಅದನ್ನು ನಿಷೇಧಿಸಲು ಸಾಧ್ಯವಿಲ್ಲ, ಬದಲಾಗಿ ಯಾವುದೇ ಇತರ ವಿಮಾನಗಳು ಈ ವಲಯದಲ್ಲಿ ಪ್ರವೇಶ ಮಾಡದಂತೆ ನಿಷೇಧ ಹೇರಲಾಗಿದೆ ಎಂದು ಅಮೆರಿಕ ಅಧ್ಯಕ್ಷರ ಭದ್ರತಾ ಸಿಬ್ಬಂದಿಗಳು ಮಾಡಿದ ಮನವಿಗೆ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಭಯೋತ್ಪಾದಕರ ದಾಳಿಯ ಭೀತಿಯ ಕಾರಣ ಜ.25 ರಿಂದ ಜ.27 ರವೆಗಿನ ಅಮೆರಿಕ ಅಧ್ಯಕ್ಷರ 3 ದಿನದ ಭಾರತ ಭೇಟಿ ಸಮಯದಲ್ಲಿ ಕೇಂದ್ರ ಸರ್ಕಾರ ವಿಶೇಷ ಭದ್ರತಾ ವ್ಯವಸ್ಥೆಯನ್ನು ನಿಯೋಜಿಸಲಾಗಿದ್ದು, ಅಲ್ಲದೆ ಅಮೆರಿಕದ ವಿಶೇಷ ಭದ್ರತಾ ಪಡೆಯು ಒಬಾಮಾ ರೊಂದಿಗೆ ಭಾರತಕ್ಕೆ ಬರಲಿದೆ.